<p><strong>ಬೀದರ್</strong>: ಬಸವ ಕೇಂದ್ರದ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿರುವ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಅವರ ‘ಭವ್ಯ ಭಾರತದ ಬಸವಣ್ಣ’ ಪ್ರವಚನ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಮಳೆಯಲ್ಲೇ ವಿಧ್ಯುಕ್ತ ಚಾಲನೆ ನೀಡಲಾಯಿತು.</p><p>ಸಂಜೆಯಿಂದಲೇ ನಗರದಲ್ಲಿ ಬಿರುಗಾಳಿ, ಗುಡುಗು ಮಿಂಚಿನ ಆರ್ಭಟ ಶುರುವಾಯಿತು. ಏಳು ಗಂಟೆಗೆ ತುಂತುರು ಮಳೆ ಆರಂಭಗೊಂಡಿತು. ಇದರ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. </p><p>ಬಳಿಕ ಸುರಿವ ಮಳೆಯಲ್ಲೇ ಮಾತನಾಡಿದ ಅವರು, ಬಸವ ಕೇಂದ್ರ 25 ವರ್ಷಗಳಿಂದ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಬಸವೇಶ್ವರರ ವಿಚಾರ ಹಿಂದಿಗಿಂತಲೂ ಇಂದು ಬಹಳ ಪ್ರಸ್ತುತ. ಬಸವಣ್ಣನವರ ಸಾಮಾಜಿಕ ಕ್ರಾಂತಿ ಸಮ ಸಮಾಜಕ್ಕಾಗಿ ಆಗಿರುವಂಥದ್ದು ಎಂದರು.</p><p>ಕಾಯಕ, ದಾಸೋಹದ ಆಧಾರದ ಮೇಲೆ ಸಹೋದರತ್ವ, ಸಹಬಾಳ್ವೆಯ ಸುಂದರ ಸಮಾಜ ಆಗಬೇಕೆನ್ನುವುದು ಬಸವಾದಿ ಶರಣರ ಕಾಳಜಿ ಆಗಿತ್ತು. ಸಾಮಾಜಿಕ ಅನಿಷ್ಠಗಳ ನಿವಾರಣೆ ಮಾಡಿ ವೈಚಾರಿಕತೆ, ವಾಸ್ತವಿಕತೆ ಆಧಾರದ ಮೇಲೆ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಅವರ ತತ್ಬಾದರ್ಶಗಳು ಸದಾ ಪ್ರಸ್ತುತ ಎಂದು ಹೇಳಿದರು. </p><p>ಜಗತ್ತಿನ ಎಲ್ಲ ಕಡೆ ಹಾಹಾಕಾರ ಇದೆ. ಯುದ್ಧ ಆರಂಭಗೊಂಡಿದೆ. ಶಾಲೆಗಳು, ಆಸ್ಪತ್ರೆಗಳ ಮೇಲೆ ಬಾಂಬ್ಗಳನ್ನು ಹಾಕಲಾಗುತ್ತಿದೆ. ಹಿಂಸೆಯಿಂದ ಸಮಾಜ ಯಾವ ಕಡೆಗೆ ಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನ ಬಹಳ ಮುಂದುವರೆದಿದೆ. ಆದರೆ, ಸಮಾಜದಲ್ಲಿ ಸುಖ, ಶಾಂತಿ ಕಣ್ಮರೆಯಾಗುತ್ತಿದೆ. ಮಾನವೀಯ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಇವುಗಳ ಪುನರ್ ಸ್ಥಾಪನೆಯಾಗಬೇಕಾದರೆ ಅದಕ್ಕೆ ಬಸವತತ್ವದಲ್ಲಿ ದಿವ್ಯಾಷಧಿ ಇದೆ. ಆ ತತ್ವದ ಮಹತ್ವ ಸಾರಲು ನಿಜಗುಣಪ್ರಭು ಸ್ವಾಮೀಜಿ ಅವರ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನಾರ್ಹ ಎಂದು ಹೇಳಿದರು.</p><p>ಆಕಾಶವಾಣಿ ಕಲಾವಿದೆ ಅಶ್ವಿನಿ ರಾಜಕುಮಾರ ಹಿರೇಮಠ ವಚನ ಸಂಗೀತ ನಡೆಸಿಕೊಟ್ಟರೆ, ನೃತ್ಯಾಂಗನ ನೃತ್ಯಾಲಯ ತಂಡದವರು ವಚನ ನೃತ್ಯ ಪ್ರಸ್ತುತಪಡಿಸಿದರು. ಯುವ ಬಸವಕೇಂದ್ರದ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಟೋಕರೆ ನಿರೂಪಿಸಿದರು. ಬಾಬುರಾವ್ ದಾನಿ ವಂದಿಸಿದರು. </p><p>ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರ ಗುರುಬಸವೇಶ್ವರರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಗೋರ್ಟಾ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಬಸವರಾಜ ಧನ್ನೂರ, ಬಸವರಾಜ ಬುಳ್ಳಾ, ಬಿ.ಜಿ.ಶೆಟಕಾರ್, ಡಾ. ರಜನೀಶ್ ವಾಲಿ, ಶಿವಶರಣಪ್ಪ ವಾಲಿ, ಆನಂದ್ ದೇವಪ್ಪ, ಜೈರಾಜ ಖಂಡ್ರೆ, ವಿದ್ಯಾವತಿ ಬಲ್ಲೂರ, ಬಾಬುವಾಲಿ, ಶ್ರೀಕಾಂತ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು. </p>.<p><strong>ವಚನ ವಾಚಿಸಿ ಉದ್ಘಾಟನೆ</strong></p><p>ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು, ‘ಇವನಾರವ, ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವನಮ್ಮವ, ಇವನಮ್ಮವ ಎಂದೆನಿಸಯ್ಯಾ ಕೂಡಲಸಂಗಮದೇವ’ ಎಂಬ ವಚನ ವಾಚಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಚಿವರ ಭಾಷಣದ ನಡುವೆ ಬಿರುಸಿನ ಮಳೆ ಬಂದು, ಗಂಟೆಗೂ ಹೆಚ್ಚು ಕಾಲ ಸುರಿದ ಕಾರಣ ವೇದಿಕೆ ಮೇಲಿದ್ದ ಸ್ವಾಮೀಜಿಗಳು, ಇತರೆ ಗಣ್ಯರು ಮಾತನಾಡಲು ಸಾಧ್ಯವಾಗಲಿಲ್ಲ. </p>.<p><strong>‘ಸತ್ಯ ನುಡಿವ ನಿಜಗುಣಪ್ರಭು’</strong></p><p>‘ಈ ನಾಡಿನ ಪ್ರಮುಖ ಮಠಾಧೀಶರಲ್ಲಿ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಕೂಡ ಒಬ್ಬರು. ಅಪ್ಪಟ ಬಸವತತ್ವದ ಪ್ರಚಾರಕರು. ಸತ್ಯ ನುಡಿವ ಸ್ವಾಮೀಜಿಗಳು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ವರ್ಣಿಸಿದರು.</p><p>ಇದ್ದುದ್ದನ್ನು ಇದ್ದ ಹಾಗೆ ಹೇಳುವ ನೇರ ನುಡಿಯುವವರು ನಿಜಗುಣಪ್ರಭು ಸ್ವಾಮೀಜಿಗಳು. ಒಂದು ತಿಂಗಳ ವರೆಗೆ ನಡೆಯುವ ಅವರ ಪ್ರವಚನ ಆಲಿಸಿ, ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.</p>.<p><strong>ಪ್ರವಚನ ಸಮಯ</strong></p><p>ಪ್ರತಿದಿನ ಸಂಜೆ 7ರಿಂದ 8ರ ವರೆಗೆ ಬೀದರ್ನ ಮನ್ನಳ್ಳಿ ರಸ್ತೆಯ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಬಸವ ಕೇಂದ್ರದ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿರುವ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಅವರ ‘ಭವ್ಯ ಭಾರತದ ಬಸವಣ್ಣ’ ಪ್ರವಚನ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಮಳೆಯಲ್ಲೇ ವಿಧ್ಯುಕ್ತ ಚಾಲನೆ ನೀಡಲಾಯಿತು.</p><p>ಸಂಜೆಯಿಂದಲೇ ನಗರದಲ್ಲಿ ಬಿರುಗಾಳಿ, ಗುಡುಗು ಮಿಂಚಿನ ಆರ್ಭಟ ಶುರುವಾಯಿತು. ಏಳು ಗಂಟೆಗೆ ತುಂತುರು ಮಳೆ ಆರಂಭಗೊಂಡಿತು. ಇದರ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. </p><p>ಬಳಿಕ ಸುರಿವ ಮಳೆಯಲ್ಲೇ ಮಾತನಾಡಿದ ಅವರು, ಬಸವ ಕೇಂದ್ರ 25 ವರ್ಷಗಳಿಂದ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಬಸವೇಶ್ವರರ ವಿಚಾರ ಹಿಂದಿಗಿಂತಲೂ ಇಂದು ಬಹಳ ಪ್ರಸ್ತುತ. ಬಸವಣ್ಣನವರ ಸಾಮಾಜಿಕ ಕ್ರಾಂತಿ ಸಮ ಸಮಾಜಕ್ಕಾಗಿ ಆಗಿರುವಂಥದ್ದು ಎಂದರು.</p><p>ಕಾಯಕ, ದಾಸೋಹದ ಆಧಾರದ ಮೇಲೆ ಸಹೋದರತ್ವ, ಸಹಬಾಳ್ವೆಯ ಸುಂದರ ಸಮಾಜ ಆಗಬೇಕೆನ್ನುವುದು ಬಸವಾದಿ ಶರಣರ ಕಾಳಜಿ ಆಗಿತ್ತು. ಸಾಮಾಜಿಕ ಅನಿಷ್ಠಗಳ ನಿವಾರಣೆ ಮಾಡಿ ವೈಚಾರಿಕತೆ, ವಾಸ್ತವಿಕತೆ ಆಧಾರದ ಮೇಲೆ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಅವರ ತತ್ಬಾದರ್ಶಗಳು ಸದಾ ಪ್ರಸ್ತುತ ಎಂದು ಹೇಳಿದರು. </p><p>ಜಗತ್ತಿನ ಎಲ್ಲ ಕಡೆ ಹಾಹಾಕಾರ ಇದೆ. ಯುದ್ಧ ಆರಂಭಗೊಂಡಿದೆ. ಶಾಲೆಗಳು, ಆಸ್ಪತ್ರೆಗಳ ಮೇಲೆ ಬಾಂಬ್ಗಳನ್ನು ಹಾಕಲಾಗುತ್ತಿದೆ. ಹಿಂಸೆಯಿಂದ ಸಮಾಜ ಯಾವ ಕಡೆಗೆ ಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನ ಬಹಳ ಮುಂದುವರೆದಿದೆ. ಆದರೆ, ಸಮಾಜದಲ್ಲಿ ಸುಖ, ಶಾಂತಿ ಕಣ್ಮರೆಯಾಗುತ್ತಿದೆ. ಮಾನವೀಯ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಇವುಗಳ ಪುನರ್ ಸ್ಥಾಪನೆಯಾಗಬೇಕಾದರೆ ಅದಕ್ಕೆ ಬಸವತತ್ವದಲ್ಲಿ ದಿವ್ಯಾಷಧಿ ಇದೆ. ಆ ತತ್ವದ ಮಹತ್ವ ಸಾರಲು ನಿಜಗುಣಪ್ರಭು ಸ್ವಾಮೀಜಿ ಅವರ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನಾರ್ಹ ಎಂದು ಹೇಳಿದರು.</p><p>ಆಕಾಶವಾಣಿ ಕಲಾವಿದೆ ಅಶ್ವಿನಿ ರಾಜಕುಮಾರ ಹಿರೇಮಠ ವಚನ ಸಂಗೀತ ನಡೆಸಿಕೊಟ್ಟರೆ, ನೃತ್ಯಾಂಗನ ನೃತ್ಯಾಲಯ ತಂಡದವರು ವಚನ ನೃತ್ಯ ಪ್ರಸ್ತುತಪಡಿಸಿದರು. ಯುವ ಬಸವಕೇಂದ್ರದ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಟೋಕರೆ ನಿರೂಪಿಸಿದರು. ಬಾಬುರಾವ್ ದಾನಿ ವಂದಿಸಿದರು. </p><p>ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರ ಗುರುಬಸವೇಶ್ವರರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಗೋರ್ಟಾ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಬಸವರಾಜ ಧನ್ನೂರ, ಬಸವರಾಜ ಬುಳ್ಳಾ, ಬಿ.ಜಿ.ಶೆಟಕಾರ್, ಡಾ. ರಜನೀಶ್ ವಾಲಿ, ಶಿವಶರಣಪ್ಪ ವಾಲಿ, ಆನಂದ್ ದೇವಪ್ಪ, ಜೈರಾಜ ಖಂಡ್ರೆ, ವಿದ್ಯಾವತಿ ಬಲ್ಲೂರ, ಬಾಬುವಾಲಿ, ಶ್ರೀಕಾಂತ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು. </p>.<p><strong>ವಚನ ವಾಚಿಸಿ ಉದ್ಘಾಟನೆ</strong></p><p>ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು, ‘ಇವನಾರವ, ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವನಮ್ಮವ, ಇವನಮ್ಮವ ಎಂದೆನಿಸಯ್ಯಾ ಕೂಡಲಸಂಗಮದೇವ’ ಎಂಬ ವಚನ ವಾಚಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಚಿವರ ಭಾಷಣದ ನಡುವೆ ಬಿರುಸಿನ ಮಳೆ ಬಂದು, ಗಂಟೆಗೂ ಹೆಚ್ಚು ಕಾಲ ಸುರಿದ ಕಾರಣ ವೇದಿಕೆ ಮೇಲಿದ್ದ ಸ್ವಾಮೀಜಿಗಳು, ಇತರೆ ಗಣ್ಯರು ಮಾತನಾಡಲು ಸಾಧ್ಯವಾಗಲಿಲ್ಲ. </p>.<p><strong>‘ಸತ್ಯ ನುಡಿವ ನಿಜಗುಣಪ್ರಭು’</strong></p><p>‘ಈ ನಾಡಿನ ಪ್ರಮುಖ ಮಠಾಧೀಶರಲ್ಲಿ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಕೂಡ ಒಬ್ಬರು. ಅಪ್ಪಟ ಬಸವತತ್ವದ ಪ್ರಚಾರಕರು. ಸತ್ಯ ನುಡಿವ ಸ್ವಾಮೀಜಿಗಳು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ವರ್ಣಿಸಿದರು.</p><p>ಇದ್ದುದ್ದನ್ನು ಇದ್ದ ಹಾಗೆ ಹೇಳುವ ನೇರ ನುಡಿಯುವವರು ನಿಜಗುಣಪ್ರಭು ಸ್ವಾಮೀಜಿಗಳು. ಒಂದು ತಿಂಗಳ ವರೆಗೆ ನಡೆಯುವ ಅವರ ಪ್ರವಚನ ಆಲಿಸಿ, ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.</p>.<p><strong>ಪ್ರವಚನ ಸಮಯ</strong></p><p>ಪ್ರತಿದಿನ ಸಂಜೆ 7ರಿಂದ 8ರ ವರೆಗೆ ಬೀದರ್ನ ಮನ್ನಳ್ಳಿ ರಸ್ತೆಯ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>