'ಭೀಕರ ಬರದಿಂದ ಗೋಶಾಲೆ ಜಾನುವಾರುಗಳಿಗೆ ನೀರು, ಮೇವು ಪೂರೈಸುವುದು ತುಂಬಾ ಕಷ್ಟವಾಗಿದೆ. ಆದರೂ ದಾನಿಗಳ ನೆರವು ಪಡೆದು ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಕೆಲ ಕಿಡಿಗೇಡಿಗಳು ಯಾವಾಗಲೋ ಸತ್ತ ಜಾನುವಾರುಗಳ ಹಳೆಯ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಗೋಶಾಲೆ ಹೆಸರು ಕೆಡಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.