ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ವಿರುದ್ಧ ಅಪಪ್ರಚಾರ: ಟೀಕೆ

Last Updated 6 ಜೂನ್ 2019, 15:41 IST
ಅಕ್ಷರ ಗಾತ್ರ

ಔರಾದ್:‘ಅಮರೇಶ್ವರ ಗೋಶಾಲೆಯ ಹೆಸರು ಕೆಡಿಸಲು ಕೆಲ ಕಿಡಿಗೇಡಿಗಳು ಅಪಪ್ರಚಾರ ನಡೆಸಿದ್ದಾರೆ' ಎಂದು ಗೋಶಾಲೆ ಅಧ್ಯಕ್ಷ ಶಿವರಾಜ ಅಲ್ಮಾಜೆ ದೂರಿದ್ದಾರೆ.

ಅವರು ಗುರುವಾರ ತಹಶೀಲ್ದಾರ್ ಎಂ. ಚಂದ್ರಶೇಖರಗೆ ದೂರು ಸಲ್ಲಿಸಿದರು.

'ಭೀಕರ ಬರದಿಂದ ಗೋಶಾಲೆ ಜಾನುವಾರುಗಳಿಗೆ ನೀರು, ಮೇವು ಪೂರೈಸುವುದು ತುಂಬಾ ಕಷ್ಟವಾಗಿದೆ. ಆದರೂ ದಾನಿಗಳ ನೆರವು ಪಡೆದು ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಕೆಲ ಕಿಡಿಗೇಡಿಗಳು ಯಾವಾಗಲೋ ಸತ್ತ ಜಾನುವಾರುಗಳ ಹಳೆಯ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಗೋಶಾಲೆ ಹೆಸರು ಕೆಡಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಗೋಶಾಲೆ ಆವರಣದಲ್ಲಿ ಕೆಲವರು ರಾತ್ರಿ ವೇಳೆ ಸಾರಾಯಿ ಸೇವನೆ ಸೇರಿದಂತೆ ಕೆಟ್ಟ ಚಟವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು’ ಎಂದಿದ್ದಾರೆ.

ಹಿರಿಯ ವೈದ್ಯ ಕಲ್ಲಪ್ಪ ಉಪ್ಪೆ, ಕಲ್ಲಪ್ಪ ಮುದ್ದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT