<p>ಮನ್ನಳ್ಳಿ(ಜನವಾಡ): ‘ಬಸವಣ್ಣನವರು ತಮ್ಮ ವಚನಗಳಲ್ಲಿ ಸಮೃದ್ಧ ಬಾಳಿನ ಸಂದೇಶ ನೀಡಿದ್ದಾರೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.</p>.<p>ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಮಂಗಳವಾರ ಬಸವ ಕೇಂದ್ರದ ಬೆಳ್ಳಿ ಹಬ್ಬದ ನಿಮಿತ್ತ ಹಮ್ಮಿಕೊಳ್ಳಲಾದ ಬಸವ ಸಂದೇಶ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಬಸವಣ್ಣನವರು 12ನೇ ಶತಮಾನದಲ್ಲಿ ಸಮ ಸಮಾಜ ಕಟ್ಟಿದ್ದರು. ತಾನೂ ಬದುಕಿ, ಇತರರಿಗೂ ಬದುಕಲು ಪ್ರೇರಣೆ ನೀಡುವುದೇ ಬಸವ ಧರ್ಮವಾಗಿದೆ’ ಎಂದು ತಿಳಿಸಿದರು.</p>.<p>‘ಸೂರ್ಯ ಬೆಳಕು ನೀಡುವಾಗ ಯಾವುದೇ ತಾರತಮ್ಯ ಇಲ್ಲ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನವರಲ್ಲಿ ಇದ್ದ ಜ್ಞಾನವೇ ಉಳಿದೆಲ್ಲರಲ್ಲೂ ಇತ್ತು. ಆದರೆ, ಇಂದು ಎಲ್ಲೆಡೆ ಜಾತಿ ವಿಷ ಬೀಜದಿಂದ ಸಮಾಜ ನಲುಗುತ್ತಿದೆ’ ಎಂದು ಕಳವಳ ವ್ಯಕ್ತಡಿಸಿದರು.</p>.<p>‘ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.</p>.<p>ಬಸವ ಕೇಂದ್ರದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಬಸವಣ್ಣನವರ ತತ್ವ, ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಬಹಳ ಅವಶ್ಯಕವಾಗಿವೆ’ ಎಂದು ಹೇಳಿದರು.</p>.<p>‘ಕಲ್ಯಾಣ ಕ್ರಾಂತಿ ಮಾನವೀಯ ಮೌಲ್ಯಗಳಿಗಾಗಿ ನಡೆದ ಕ್ರಾಂತಿಯಾಗಿದೆ’ ಎಂದು ತಿಳಿಸಿದರು.</p>.<p>ಮನ್ನಳ್ಳಿ ಲಿಂಗಾಯತ ಸಮಾಜದ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಮಾತನಾಡಿದರು.</p>.<p>ಪ್ರಮುಖರಾದ ಬಸವರಾಜ ಅಮ್ಮಣ್ಣ, ಬಾಬುರಾವ್ ದಾನಿ, ಶಿವಶಂಕರ ಟೋಕರೆ, ಹಮೀದ್ಮಿಯ ನಿರ್ಣಾ, ಶಂಕರ ಬಾಬು, ಹಣಮಂತ ಪಂಚಭಾಯಿ, ಗೋಪಾಲರಾವ್, ಸುನೀಲಕುಮಾರ, ಡಾ.ಮಠಪತಿ, ರಾಜಶೇಖರ ಶೆಟಕಾರ್ ಮೊದಲಾದವರು ಇದ್ದರು.</p>.<p>ಬಾಬುರಾವ್ ಮಡಕಿ ಸ್ವಾಗತಿಸಿದರು. ಶ್ರೀಕಾಂತ ತೂಗಾ ನಿರೂಪಿಸಿದರು. ಮಲ್ಲಿಕಾರ್ಜುನ ಕಾಮಾ ವಂದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವ ಮಂತ್ರ ಘೋಷಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-33-1564055532</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮನ್ನಳ್ಳಿ(ಜನವಾಡ): ‘ಬಸವಣ್ಣನವರು ತಮ್ಮ ವಚನಗಳಲ್ಲಿ ಸಮೃದ್ಧ ಬಾಳಿನ ಸಂದೇಶ ನೀಡಿದ್ದಾರೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.</p>.<p>ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಮಂಗಳವಾರ ಬಸವ ಕೇಂದ್ರದ ಬೆಳ್ಳಿ ಹಬ್ಬದ ನಿಮಿತ್ತ ಹಮ್ಮಿಕೊಳ್ಳಲಾದ ಬಸವ ಸಂದೇಶ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಬಸವಣ್ಣನವರು 12ನೇ ಶತಮಾನದಲ್ಲಿ ಸಮ ಸಮಾಜ ಕಟ್ಟಿದ್ದರು. ತಾನೂ ಬದುಕಿ, ಇತರರಿಗೂ ಬದುಕಲು ಪ್ರೇರಣೆ ನೀಡುವುದೇ ಬಸವ ಧರ್ಮವಾಗಿದೆ’ ಎಂದು ತಿಳಿಸಿದರು.</p>.<p>‘ಸೂರ್ಯ ಬೆಳಕು ನೀಡುವಾಗ ಯಾವುದೇ ತಾರತಮ್ಯ ಇಲ್ಲ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನವರಲ್ಲಿ ಇದ್ದ ಜ್ಞಾನವೇ ಉಳಿದೆಲ್ಲರಲ್ಲೂ ಇತ್ತು. ಆದರೆ, ಇಂದು ಎಲ್ಲೆಡೆ ಜಾತಿ ವಿಷ ಬೀಜದಿಂದ ಸಮಾಜ ನಲುಗುತ್ತಿದೆ’ ಎಂದು ಕಳವಳ ವ್ಯಕ್ತಡಿಸಿದರು.</p>.<p>‘ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.</p>.<p>ಬಸವ ಕೇಂದ್ರದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಬಸವಣ್ಣನವರ ತತ್ವ, ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಬಹಳ ಅವಶ್ಯಕವಾಗಿವೆ’ ಎಂದು ಹೇಳಿದರು.</p>.<p>‘ಕಲ್ಯಾಣ ಕ್ರಾಂತಿ ಮಾನವೀಯ ಮೌಲ್ಯಗಳಿಗಾಗಿ ನಡೆದ ಕ್ರಾಂತಿಯಾಗಿದೆ’ ಎಂದು ತಿಳಿಸಿದರು.</p>.<p>ಮನ್ನಳ್ಳಿ ಲಿಂಗಾಯತ ಸಮಾಜದ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಮಾತನಾಡಿದರು.</p>.<p>ಪ್ರಮುಖರಾದ ಬಸವರಾಜ ಅಮ್ಮಣ್ಣ, ಬಾಬುರಾವ್ ದಾನಿ, ಶಿವಶಂಕರ ಟೋಕರೆ, ಹಮೀದ್ಮಿಯ ನಿರ್ಣಾ, ಶಂಕರ ಬಾಬು, ಹಣಮಂತ ಪಂಚಭಾಯಿ, ಗೋಪಾಲರಾವ್, ಸುನೀಲಕುಮಾರ, ಡಾ.ಮಠಪತಿ, ರಾಜಶೇಖರ ಶೆಟಕಾರ್ ಮೊದಲಾದವರು ಇದ್ದರು.</p>.<p>ಬಾಬುರಾವ್ ಮಡಕಿ ಸ್ವಾಗತಿಸಿದರು. ಶ್ರೀಕಾಂತ ತೂಗಾ ನಿರೂಪಿಸಿದರು. ಮಲ್ಲಿಕಾರ್ಜುನ ಕಾಮಾ ವಂದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವ ಮಂತ್ರ ಘೋಷಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-33-1564055532</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>