<p>ಅಲಿಯಂಬರ್(ಜನವಾಡ): ‘ಗೌತಮ ಬುದ್ಧರ ತತ್ವಗಳ ಪಾಲನೆಯಿಂದ ವಿಶ್ವದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲು ಸಾಧ್ಯವಿದೆ’ ಎಂದು ಆಣದೂರಿನ ಭಂತೆ ಜ್ಞಾನಸಾಗರ್ ಹೇಳಿದರು.</p>.<p>ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದ ತಕ್ಷಶೀಲ ಬುದ್ಧ ವಿಹಾರದಲ್ಲಿ ಚೈತ್ರ ಪೂರ್ಣಿಮೆ ನಿಮಿತ್ತ ಗುರುವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೌತಮ ಬುದ್ಧರ ತತ್ವಗಳು ಶ್ರೇಷ್ಠವಾಗಿವೆ. ಹೀಗಾಗಿಯೇ ಮಹಾಜ್ಞಾನಿ ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು’ ಎಂದು ತಿಳಿಸಿದರು.</p>.<p>‘ಜೀವನ ಮುಕ್ತಿ ಹೊಂದಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಮೂಢ ಆಚರಣೆಗಳಿಂದ ದೂರ ಇರಬೇಕು’ ಎಂದು ಹೇಳಿದರು.</p>.<p>ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಭಂತೆ ಕರುಣಾನಂದ, ಭಂತೆ ಸಂಘಸೇವಕ, ಮಾತೆ ಅರ್ಚಸ್ಮತಿ, ಪ್ರಮುಖರಾದ ವೀರಶೆಟ್ಟಿ ಕಟ್ಟೆ, ಸಂತೋಷ್ ಪಡಸಲೆ, ಸಂಗಮೇಶ ಬಾವಿದೊಡ್ಡಿ, ಧರ್ಮೇಂದ್ರ ಯರನಳ್ಳಿ, ಶಂಕರ ಚೊಂಡಿ, ತುಕಾರಾಮ ಜನವಾಡ, ರಾಜಕುಮಾರ ಹಾಲಹಿಪ್ಪರ್ಗೆ, ರಮೇಶ ಬಾವಿದೊಡ್ಡಿ, ರಾಜಕುಮಾರ ಬಾವಿದೊಡ್ಡಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-33-2138060994</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಲಿಯಂಬರ್(ಜನವಾಡ): ‘ಗೌತಮ ಬುದ್ಧರ ತತ್ವಗಳ ಪಾಲನೆಯಿಂದ ವಿಶ್ವದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲು ಸಾಧ್ಯವಿದೆ’ ಎಂದು ಆಣದೂರಿನ ಭಂತೆ ಜ್ಞಾನಸಾಗರ್ ಹೇಳಿದರು.</p>.<p>ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದ ತಕ್ಷಶೀಲ ಬುದ್ಧ ವಿಹಾರದಲ್ಲಿ ಚೈತ್ರ ಪೂರ್ಣಿಮೆ ನಿಮಿತ್ತ ಗುರುವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೌತಮ ಬುದ್ಧರ ತತ್ವಗಳು ಶ್ರೇಷ್ಠವಾಗಿವೆ. ಹೀಗಾಗಿಯೇ ಮಹಾಜ್ಞಾನಿ ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು’ ಎಂದು ತಿಳಿಸಿದರು.</p>.<p>‘ಜೀವನ ಮುಕ್ತಿ ಹೊಂದಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಮೂಢ ಆಚರಣೆಗಳಿಂದ ದೂರ ಇರಬೇಕು’ ಎಂದು ಹೇಳಿದರು.</p>.<p>ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಭಂತೆ ಕರುಣಾನಂದ, ಭಂತೆ ಸಂಘಸೇವಕ, ಮಾತೆ ಅರ್ಚಸ್ಮತಿ, ಪ್ರಮುಖರಾದ ವೀರಶೆಟ್ಟಿ ಕಟ್ಟೆ, ಸಂತೋಷ್ ಪಡಸಲೆ, ಸಂಗಮೇಶ ಬಾವಿದೊಡ್ಡಿ, ಧರ್ಮೇಂದ್ರ ಯರನಳ್ಳಿ, ಶಂಕರ ಚೊಂಡಿ, ತುಕಾರಾಮ ಜನವಾಡ, ರಾಜಕುಮಾರ ಹಾಲಹಿಪ್ಪರ್ಗೆ, ರಮೇಶ ಬಾವಿದೊಡ್ಡಿ, ರಾಜಕುಮಾರ ಬಾವಿದೊಡ್ಡಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-33-2138060994</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>