<p><strong>ಚಿಮಕೋಡ್</strong>(ಜನವಾಡ): ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ 13ನೇ ವರ್ಷದ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಶುಕ್ರವಾರ ಆರಂಭಗೊಂಡಿತು.</p>.<p>ಮೊದಲ ದಿನ ಭಜನೆ, ಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಪ್ರಮುಖರಾದ ಅಂಬಾದಾಸ್ ಮಹಾರಾಜ, ಸುರೇಶ ಪಾಟೀಲ, ಸೋಮನಾಥ ಕಂದಗೂಳೆ, ಕಂಟೆಪ್ಪ ಬೊಮ್ಮಗೊಂಡೆ, ಶಿವಕುಮಾರ ಟೊಳ್ಳೆ, ಪ್ರಸಾದ ಪಾಟೀಲ, ಗುರುನಾಥ ಬೊಮ್ಮಗೊಂಡೆ, ಬಿಚ್ಚಪ್ಪ ಏಖ್ಖೆಳ್ಳಿಕರ್, ಮಲ್ಲಶೆಟ್ಟಿ ಡೆಂಪೆ, ಶ್ರೀಕಾಂತ ಬಿರಾದಾರ, ಸಿದ್ದಪ್ಪ ಟೊಳ್ಳೆ, ಲಕ್ಷ್ಮಣ ಟೊಳ್ಳೆ, ನರಸಪ್ಪ ಮೇತ್ರೆ ಭಾಗವಹಿಸಿದ್ದರು.</p>.<p>15ರ ವರೆಗೆ ಸಪ್ತಾಹ: ಸಪ್ತಾಹ ಅಂಗವಾಗಿ ಮೇ 15ರ ವರೆಗೆ ಪ್ರತಿ ದಿನ ಭಜನೆ, ಕೀರ್ತನೆ ನಡೆಯಲಿವೆ. ತೆಲಂಗಾಣ, ಮಹಾರಾಷ್ಟ್ರದ ಖ್ಯಾತ ಕೀರ್ತನಕಾರರು ಹಾಗೂ ಪ್ರವಚನಕಾರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಸಂಜುಕುಮಾರ ಟೊಳ್ಳೆ, ಮಾರುತಿ ಶಿವಬಾರೆ ತಿಳಿಸಿದ್ದಾರೆ.</p>.<p>ಮೇ 15 ರಂದು ಸಪ್ತಾಹ ಸಮಾರೋಪಗೊಳ್ಳಲಿದೆ. ಅಂದು ಅನ್ನ ಪ್ರಸಾದ ವಿತರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-33-1008756936</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಮಕೋಡ್</strong>(ಜನವಾಡ): ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ 13ನೇ ವರ್ಷದ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಶುಕ್ರವಾರ ಆರಂಭಗೊಂಡಿತು.</p>.<p>ಮೊದಲ ದಿನ ಭಜನೆ, ಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಪ್ರಮುಖರಾದ ಅಂಬಾದಾಸ್ ಮಹಾರಾಜ, ಸುರೇಶ ಪಾಟೀಲ, ಸೋಮನಾಥ ಕಂದಗೂಳೆ, ಕಂಟೆಪ್ಪ ಬೊಮ್ಮಗೊಂಡೆ, ಶಿವಕುಮಾರ ಟೊಳ್ಳೆ, ಪ್ರಸಾದ ಪಾಟೀಲ, ಗುರುನಾಥ ಬೊಮ್ಮಗೊಂಡೆ, ಬಿಚ್ಚಪ್ಪ ಏಖ್ಖೆಳ್ಳಿಕರ್, ಮಲ್ಲಶೆಟ್ಟಿ ಡೆಂಪೆ, ಶ್ರೀಕಾಂತ ಬಿರಾದಾರ, ಸಿದ್ದಪ್ಪ ಟೊಳ್ಳೆ, ಲಕ್ಷ್ಮಣ ಟೊಳ್ಳೆ, ನರಸಪ್ಪ ಮೇತ್ರೆ ಭಾಗವಹಿಸಿದ್ದರು.</p>.<p>15ರ ವರೆಗೆ ಸಪ್ತಾಹ: ಸಪ್ತಾಹ ಅಂಗವಾಗಿ ಮೇ 15ರ ವರೆಗೆ ಪ್ರತಿ ದಿನ ಭಜನೆ, ಕೀರ್ತನೆ ನಡೆಯಲಿವೆ. ತೆಲಂಗಾಣ, ಮಹಾರಾಷ್ಟ್ರದ ಖ್ಯಾತ ಕೀರ್ತನಕಾರರು ಹಾಗೂ ಪ್ರವಚನಕಾರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಸಂಜುಕುಮಾರ ಟೊಳ್ಳೆ, ಮಾರುತಿ ಶಿವಬಾರೆ ತಿಳಿಸಿದ್ದಾರೆ.</p>.<p>ಮೇ 15 ರಂದು ಸಪ್ತಾಹ ಸಮಾರೋಪಗೊಳ್ಳಲಿದೆ. ಅಂದು ಅನ್ನ ಪ್ರಸಾದ ವಿತರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-33-1008756936</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>