ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ. ಶಾಮಸುಂದರ ಪರಿನಿರ್ವಾಣ ದಿನಾಚರಣೆ

Last Updated 19 ಮೇ 2020, 15:21 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೋಸೈಟಿ ಕಚೇರಿಯಲ್ಲಿ ಮಂಗಳವಾರ ಮಾಜಿ ಶಾಸಕ ಬಿ. ಶಾಮಸುಂದರ ಅವರ 45ನೇ ಪರಿನಿರ್ವಾಣ ದಿನ ಆಚರಿಸಲಾಯಿತು.

ಪ್ರಮುಖರಾದ ಮರೆಪ್ಪ ಹೊಸಮನಿ ಹಾಗೂ ಅನಿಲಕುಮಾರ ಬೆಲ್ದಾರ್ ಅವರು ಬಿ. ಶಾಮಸುಂದರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬಿ. ಶಾಮಸುಂದರ ಅವರ ಜೀವನ ಮತ್ತು ಸಾಧನೆ ಕುರಿತು ಅನೇಕ ಪ್ರಮುಖರು ಮಾತನಾಡಿದರು.

ಸುರೇಶ ಗಿರೆಪ್ಪ ಲಾಖೆ, ಮಾಣಿಕರಾವ್ ಖಾನಾಪುರ, ಅಶೋಕಕುಮಾರ ಮಾಳಗೆ ಇದ್ದರು. ಮಹಾದೇವ ಕಾಂಬಳೆ ನಿರೂಪಿಸಿದರು.

ಬಿ. ಶಾಮಸುಂದರ ಅಭಿಮಾನಿ ಬಳಗ, ಸಂವಿಧಾನ ಸಂರಕ್ಷಣಾ ಸಮಿತಿ, ಬಹುಜನ ಸಮಾಜ ಪಕ್ಷ, ಎಸ್‍ಸಿ, ಎಸ್‍ಟಿ ಶಿಕ್ಷಕರ ಸಂಘಟನೆ ಹಾಗೂ ದಲಿತ ಸಂಘಟನೆಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT