<p><strong>ಕಮಠಾಣ(ಜನವಾಡ):</strong> ‘ಪಟ್ಟಣ ಪಂಚಾಯಿತಿ’ ಘೋಷಣೆಯಾಗಿ ತಿಂಗಳುಗಳೇ ಕಳೆದರೂ ‘ಕಮಠಾಣ’ದ ಚಿತ್ರಣ ಬದಲಾಗಿಲ್ಲ. ಜನ ಮೂಲಸೌಕರ್ಯಕ್ಕೆ ಪರದಾಡುವುದು ತಪ್ಪಿಲ್ಲ.</p>.<p>ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲ್ಯ ಮೊದಲಾದ ಸಮಸ್ಯೆಗಳು ಬೀದರ್ ತಾಲ್ಲೂಕಿನ ಅತಿ ದೊಡ್ಡ ಗ್ರಾಮಕ್ಕೆ ಬೆನ್ನು ಬಿಡದೆ ಕಾಡುತ್ತಿವೆ.</p>.<p>ಜಲ ಜೀವನ ಮಿಷನ್ ಯೋಜನೆ ಕಾಮಗಾರಿಯಿಂದಾಗಿ ಗ್ರಾಮದ ರಸ್ತೆಗಳು ಹಾಳಾಗಿವೆ. ಚರಂಡಿಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನ ದೂರದ ಪ್ರದೇಶಗಳಿಂದ ತಲೆ ಮೇಲೆ ಕೊಡ ಹೊತ್ತು ನೀರು ತರುವುದು ಸಾಮಾನ್ಯವಾಗಿದೆ. ಸ್ವಚ್ಛತೆ ಮರೀಚಿಕೆಯಾಗಿದೆ.</p>.<p>ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಬೀದರ್- ಮನ್ನಾಎಖ್ಖೆಳ್ಳಿ ಮುಖ್ಯರಸ್ತೆ ಮೇಲೆಯೇ ಬೈಕ್ಗಳು ನಿಲುಗಡೆ ಆಗುತ್ತಿವೆ. ರಸ್ತೆ ಬದಿಯಲ್ಲಿನ ಹಳೆಯ ಬಸ್ ನಿಲ್ದಾಣ ಈಗ ಕಬ್ಬಿನ ಹಾಲಿನ ವ್ಯಾಪಾರ ಮಾಡುವವರಿಗೆ ಆಸರೆ ತಾಣವಾಗಿದೆ. ಜನರ ಜ್ಞಾನದ ಹಸಿವು ತಣಿಸಬೇಕಿದ್ದ ಗ್ರಂಥಾಲಯ ಕಟ್ಟಡದ ಬಾಗಿಲಿಗೆ ಬೀಗ ಬಿದ್ದಿದೆ. ಆಧಾರ್ ತಿದ್ದುಪಡಿ ಕೇಂದ್ರ ಸ್ಥಳಾಂತರಗೊಂಡಿದೆ. ಸೌಕರ್ಯಗಳ ಕೊರತೆ ಹಾಗೂ ಅನೇಕ ರೀತಿಯ ಅನಾನುಕೂಲಗಳ ಮಧ್ಯೆಯೇ ಜನ ಬದುಕು ಸಾಗಿಸುವಂತಾಗಿದೆ.</p>.<p>‘ಮೂರು ವರ್ಷವಾದರೂ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲ ಕಡೆಗಳಲ್ಲಿ ನಲ್ಲಿ ಅಳವಡಿಸಿದ್ದರೆ, ಇನ್ನೂ ಕೆಲ ಕಡೆಗಳಲ್ಲಿ ಕೂಡಿಸಿಲ್ಲ. ಪೈಪ್ ಅಳವಡಿಕೆಗಾಗಿ ಅಗೆದಿದ್ದರಿಂದ ರಸ್ತೆಗಳು ಹಾಳಾಗಿದ್ದು, ವಾಹನ- ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಹೇಳುತ್ತಾರೆ ಮುಖಂಡ ಎಂ.ಡಿ. ಖಾಲೇದ್.</p>.<p>‘ನಿಯಮಿತವಾಗಿ ಚರಂಡಿ ಶುಚಿಗೊಳಿಸುವ ಕೆಲಸ ಆಗುತ್ತಿಲ್ಲ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳು ಹರಡಬಹುದಾದ ಭೀತಿ ಉಂಟಾಗಿದೆ’ ಎಂದು ದೂರುತ್ತಾರೆ.</p>.<p>‘ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ, ಹನುಮಾನ ಮಂದಿರ ಹಿಂದುಗಡೆ ಪ್ರದೇಶ, ವಾರ್ಡ್ ಸಂಖ್ಯೆ 3 ಹಾಗೂ 6 ರಲ್ಲಿ ನೀರಿನ ಸಮಸ್ಯೆ ಉಂಟಾಗಿದೆ’ ಎಂದು ತಿಳಿಸುತ್ತಾರೆ ಭಾಗೀರಥಿ ಗಾದಗೆನೋರ, ನಾಗಮ್ಮ ನವಲಸಪುರ, ಗಣೇಶ್ ಹಾಗೂ ಇತರರು.</p>.<p>‘ನಲ್ಲಿಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ಕೆಲ ಕಡೆ ಕುಡಿಯಲು ಯೋಗ್ಯವಾದ ನೀರಿಲ್ಲ. ಹೀಗಾಗಿ, ನೀರಿಗಾಗಿ ಅಲೆದಾಡಬೇಕಾಗಿದೆ’ ಎಂದು ಗೋಳು ತೋಡಿಕೊಳ್ಳುತ್ತಾರೆ.</p>.<p>‘ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು, ರಸ್ತೆ ದುರಸ್ತಿಪಡಿಸಬೇಕು. ಗ್ರಾಮದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು’ ಎಂದು ಎಂ.ಡಿ. ನಿಜಾಮ್ ಒತ್ತಾಯಿಸುತ್ತಾರೆ.</p>.<p>‘ಕೇಂದ್ರದ 15ನೇ ಹಣಕಾಸು ನಿಧಿಯ ಅನುದಾನ ಬಂದಿಲ್ಲ. ಸಂಗ್ರಹವಾದ ತೆರಿಗೆ ಹಣದಿಂದಲೇ ಕುಡಿಯುವ ನೀರು, ಚರಂಡಿ ನಿರ್ವಹಣೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸಾಧ್ಯವಾದ ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಹೇಳುತ್ತಾರೆ ಕಮಠಾಣ ಪಿಡಿಒ ದೇವೇಂದ್ರಪ್ಪ ಭಾಲ್ಕೆ.</p>.<div><blockquote>ಆಧಾರ್ ತಿದ್ದುಪಡಿ ಕೇಂದ್ರ ಬೇರೆಡೆ ಸ್ಥಳಾಂತರಿಸಿದ್ದರಿಂದ ಗ್ರಾಮಸ್ಥರು ಆಧಾರ್ ತಿದ್ದುಪಡಿಗೆ ಬೀದರ್ಗೆ ಹೋಗಬೇಕಾಗಿದೆ. ಹೀಗಾಗಿ ಕೇಂದ್ರ ಪುನಃ ಆರಂಭಿಸಬೇಕು</blockquote><span class="attribution">ಎಂ.ಡಿ. ಖಾಲೇದ್, ಗ್ರಾಮಸ್ಥ </span></div>.<div><blockquote>ನಲ್ಲಿಗೆ ಕೆಲ ಕಾಲ ಮಾತ್ರ ನೀರು ಬಿಡಲಾಗುತ್ತಿದೆ. ಇದರಿಂದ ನೀರಿಗೆ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಗೆಹರಿಸದಿದ್ದರೆ ಕೊಡದೊಂದಿಗೆ ಪಂಚಾಯಿತಿಗೆ ಹೋಗಬೇಕಾಗುತ್ತದೆ</blockquote><span class="attribution">ಭಾಗೀರಥಿ ಗಾದಗೆನೋರ್, ಗ್ರಾಮಸ್ಥೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಠಾಣ(ಜನವಾಡ):</strong> ‘ಪಟ್ಟಣ ಪಂಚಾಯಿತಿ’ ಘೋಷಣೆಯಾಗಿ ತಿಂಗಳುಗಳೇ ಕಳೆದರೂ ‘ಕಮಠಾಣ’ದ ಚಿತ್ರಣ ಬದಲಾಗಿಲ್ಲ. ಜನ ಮೂಲಸೌಕರ್ಯಕ್ಕೆ ಪರದಾಡುವುದು ತಪ್ಪಿಲ್ಲ.</p>.<p>ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲ್ಯ ಮೊದಲಾದ ಸಮಸ್ಯೆಗಳು ಬೀದರ್ ತಾಲ್ಲೂಕಿನ ಅತಿ ದೊಡ್ಡ ಗ್ರಾಮಕ್ಕೆ ಬೆನ್ನು ಬಿಡದೆ ಕಾಡುತ್ತಿವೆ.</p>.<p>ಜಲ ಜೀವನ ಮಿಷನ್ ಯೋಜನೆ ಕಾಮಗಾರಿಯಿಂದಾಗಿ ಗ್ರಾಮದ ರಸ್ತೆಗಳು ಹಾಳಾಗಿವೆ. ಚರಂಡಿಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನ ದೂರದ ಪ್ರದೇಶಗಳಿಂದ ತಲೆ ಮೇಲೆ ಕೊಡ ಹೊತ್ತು ನೀರು ತರುವುದು ಸಾಮಾನ್ಯವಾಗಿದೆ. ಸ್ವಚ್ಛತೆ ಮರೀಚಿಕೆಯಾಗಿದೆ.</p>.<p>ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಬೀದರ್- ಮನ್ನಾಎಖ್ಖೆಳ್ಳಿ ಮುಖ್ಯರಸ್ತೆ ಮೇಲೆಯೇ ಬೈಕ್ಗಳು ನಿಲುಗಡೆ ಆಗುತ್ತಿವೆ. ರಸ್ತೆ ಬದಿಯಲ್ಲಿನ ಹಳೆಯ ಬಸ್ ನಿಲ್ದಾಣ ಈಗ ಕಬ್ಬಿನ ಹಾಲಿನ ವ್ಯಾಪಾರ ಮಾಡುವವರಿಗೆ ಆಸರೆ ತಾಣವಾಗಿದೆ. ಜನರ ಜ್ಞಾನದ ಹಸಿವು ತಣಿಸಬೇಕಿದ್ದ ಗ್ರಂಥಾಲಯ ಕಟ್ಟಡದ ಬಾಗಿಲಿಗೆ ಬೀಗ ಬಿದ್ದಿದೆ. ಆಧಾರ್ ತಿದ್ದುಪಡಿ ಕೇಂದ್ರ ಸ್ಥಳಾಂತರಗೊಂಡಿದೆ. ಸೌಕರ್ಯಗಳ ಕೊರತೆ ಹಾಗೂ ಅನೇಕ ರೀತಿಯ ಅನಾನುಕೂಲಗಳ ಮಧ್ಯೆಯೇ ಜನ ಬದುಕು ಸಾಗಿಸುವಂತಾಗಿದೆ.</p>.<p>‘ಮೂರು ವರ್ಷವಾದರೂ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲ ಕಡೆಗಳಲ್ಲಿ ನಲ್ಲಿ ಅಳವಡಿಸಿದ್ದರೆ, ಇನ್ನೂ ಕೆಲ ಕಡೆಗಳಲ್ಲಿ ಕೂಡಿಸಿಲ್ಲ. ಪೈಪ್ ಅಳವಡಿಕೆಗಾಗಿ ಅಗೆದಿದ್ದರಿಂದ ರಸ್ತೆಗಳು ಹಾಳಾಗಿದ್ದು, ವಾಹನ- ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಹೇಳುತ್ತಾರೆ ಮುಖಂಡ ಎಂ.ಡಿ. ಖಾಲೇದ್.</p>.<p>‘ನಿಯಮಿತವಾಗಿ ಚರಂಡಿ ಶುಚಿಗೊಳಿಸುವ ಕೆಲಸ ಆಗುತ್ತಿಲ್ಲ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳು ಹರಡಬಹುದಾದ ಭೀತಿ ಉಂಟಾಗಿದೆ’ ಎಂದು ದೂರುತ್ತಾರೆ.</p>.<p>‘ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ, ಹನುಮಾನ ಮಂದಿರ ಹಿಂದುಗಡೆ ಪ್ರದೇಶ, ವಾರ್ಡ್ ಸಂಖ್ಯೆ 3 ಹಾಗೂ 6 ರಲ್ಲಿ ನೀರಿನ ಸಮಸ್ಯೆ ಉಂಟಾಗಿದೆ’ ಎಂದು ತಿಳಿಸುತ್ತಾರೆ ಭಾಗೀರಥಿ ಗಾದಗೆನೋರ, ನಾಗಮ್ಮ ನವಲಸಪುರ, ಗಣೇಶ್ ಹಾಗೂ ಇತರರು.</p>.<p>‘ನಲ್ಲಿಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ಕೆಲ ಕಡೆ ಕುಡಿಯಲು ಯೋಗ್ಯವಾದ ನೀರಿಲ್ಲ. ಹೀಗಾಗಿ, ನೀರಿಗಾಗಿ ಅಲೆದಾಡಬೇಕಾಗಿದೆ’ ಎಂದು ಗೋಳು ತೋಡಿಕೊಳ್ಳುತ್ತಾರೆ.</p>.<p>‘ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು, ರಸ್ತೆ ದುರಸ್ತಿಪಡಿಸಬೇಕು. ಗ್ರಾಮದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು’ ಎಂದು ಎಂ.ಡಿ. ನಿಜಾಮ್ ಒತ್ತಾಯಿಸುತ್ತಾರೆ.</p>.<p>‘ಕೇಂದ್ರದ 15ನೇ ಹಣಕಾಸು ನಿಧಿಯ ಅನುದಾನ ಬಂದಿಲ್ಲ. ಸಂಗ್ರಹವಾದ ತೆರಿಗೆ ಹಣದಿಂದಲೇ ಕುಡಿಯುವ ನೀರು, ಚರಂಡಿ ನಿರ್ವಹಣೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸಾಧ್ಯವಾದ ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಹೇಳುತ್ತಾರೆ ಕಮಠಾಣ ಪಿಡಿಒ ದೇವೇಂದ್ರಪ್ಪ ಭಾಲ್ಕೆ.</p>.<div><blockquote>ಆಧಾರ್ ತಿದ್ದುಪಡಿ ಕೇಂದ್ರ ಬೇರೆಡೆ ಸ್ಥಳಾಂತರಿಸಿದ್ದರಿಂದ ಗ್ರಾಮಸ್ಥರು ಆಧಾರ್ ತಿದ್ದುಪಡಿಗೆ ಬೀದರ್ಗೆ ಹೋಗಬೇಕಾಗಿದೆ. ಹೀಗಾಗಿ ಕೇಂದ್ರ ಪುನಃ ಆರಂಭಿಸಬೇಕು</blockquote><span class="attribution">ಎಂ.ಡಿ. ಖಾಲೇದ್, ಗ್ರಾಮಸ್ಥ </span></div>.<div><blockquote>ನಲ್ಲಿಗೆ ಕೆಲ ಕಾಲ ಮಾತ್ರ ನೀರು ಬಿಡಲಾಗುತ್ತಿದೆ. ಇದರಿಂದ ನೀರಿಗೆ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಗೆಹರಿಸದಿದ್ದರೆ ಕೊಡದೊಂದಿಗೆ ಪಂಚಾಯಿತಿಗೆ ಹೋಗಬೇಕಾಗುತ್ತದೆ</blockquote><span class="attribution">ಭಾಗೀರಥಿ ಗಾದಗೆನೋರ್, ಗ್ರಾಮಸ್ಥೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>