<p><strong>ರಂಜೋಳಖೇಣಿ(ಜನವಾಡ):</strong> ಕಾಯಂ ಶಿಕ್ಷಕರಿಬ್ಬರು ತಮ್ಮ ಸ್ವಂತ ಹಣ ಹಾಗೂ ದಾನಿಗಳ ನೆರವಿನಿಂದ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೊಸ ಕಳೆ ನೀಡಿದ್ದಾರೆ.</p>.<p>ಮುಖ್ಯಶಿಕ್ಷಕ ಮಂಜುನಾಥ ಎನ್.ಆರ್ ಹಾಗೂ ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ್ ಠಾಕೂರ್ ಅವರ ವಿಶೇಷ ಪ್ರಯತ್ನದಿಂದಾಗಿ ಈಗ ಶಾಲೆಯ ಚಿತ್ರಣವೇ ಬದಲಾಗಿದೆ. ಶಾಲೆಯ ಆವರಣದಲ್ಲಿ ಅಂದದ ಉದ್ಯಾನ ಅರಳಿದೆ. ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಆಕರ್ಷಕ ಚಿತ್ರಗಳು ರಚನೆಯಾಗಿವೆ.</p>.<p>₹2 ಲಕ್ಷ ವೆಚ್ಚದಲ್ಲಿ ಶಾಲೆಯಲ್ಲಿ ಉದ್ಯಾನ ನಿರ್ಮಾಣ ಹಾಗೂ ಗೋಡೆಗಳ ಮೇಲೆ ಚಿತ್ರ ರಚನೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸುತ್ತಾರೆ ಮಂಜುನಾಥ ಎನ್.ಆರ್.</p>.<p>ಉದ್ಯಾನದಲ್ಲಿ ನೀರು ಚಿಮ್ಮಿಸುವ ಕಾರಂಜಿ ಕಟ್ಟಿಸಲಾಗಿದೆ. ಹೂವು, ಕರಿಬೇವು, ಅಲಂಕಾರಿಕ, ಔಷಧ ಸಸಿಗಳನ್ನು ನೆಡಲಾಗಿದೆ. ಪಾರ್ಕಿಂಗ್ ಟೈಲ್ಸ್ ಹಾಕಲಾಗಿದೆ. ಗ್ರಾಮದಲ್ಲಿ ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದ ಹಳೆಯ ಶಾಸನಗಳನ್ನು ತಂದು ಸಂರಕ್ಷಿಸಿ ಉದ್ಯಾನದ ಒಳಗೆ ಇಡಲಾಗಿದೆ ಎಂದು ಹೇಳುತ್ತಾರೆ.</p>.<p>ವಿದ್ಯಾರ್ಥಿಗಳು ಬಿಡುವಿನ ಅವಧಿಯಲ್ಲಿ ಉದ್ಯಾನದಲ್ಲಿ ಖುಷಿಯಿಂದ ಓದಬಹುದಾಗಿದೆ ಎಂದು ತಿಳಿಸುತ್ತಾರೆ.</p>.<p>‘ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ್ ಠಾಕೂರ್ ಅವರು ಚಿತ್ರ ರಚನೆ ಮೂಲಕ ಶಾಲೆಯ ಗೋಡೆಗಳ ಸೌಂದರ್ಯ ಹೆಚ್ಚಿಸಿದ್ದಾರೆ’ ಎಂದು ಹೇಳುತ್ತಾರೆ.</p>.<p>‘ಗೋಡೆಗಳ ಮೇಲೆ ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಬಿದ್ರಿ ಕಲೆ ಚಿತ್ರ ಬಿಡಿಸಲಾಗಿದೆ. ಸರ್ಕಾರದ ಸೌಲಭ್ಯಗಳು, ವಿಷಯವಾರು ಮಾಹಿತಿ ಹಾಗೂ ಪ್ರೇರಣಾತ್ಮಕ ನುಡಿಗಳನ್ನು ಬರೆಯಲಾಗಿದೆ’ ಎಂದು ತಿಳಿಸುತ್ತಾರೆ.</p>.<p>‘ಶಾಲೆಗೆ ಮಕ್ಕಳನ್ನು ಆಕರ್ಷಿಸಲು, ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಹಾಗೂ ಪರಿಸರ ಜಾಗೃತಿ ಮೂಡಿಸಲು ಉದ್ಯಾನ ಹಾಗೂ ಗೋಡೆ ಚಿತ್ರಗಳು ನೆರವಾಗಲಿವೆ’ ಎಂದು ಹೇಳುತ್ತಾರೆ.</p>.<p>ಉದ್ಯಾನ ಹಾಗೂ ಗೋಡೆ ಚಿತ್ರ ರಚನೆಗೆ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು ₹60 ಸಾವಿರ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ₹20 ಸಾವಿರ ದೇಣಿಗೆ ನೀಡಿದ್ದಾರೆ. ಉಳಿದ ₹1.20 ಲಕ್ಷವನ್ನು ತಾನು ಹಾಗೂ ವಿಷ್ಣುಕಾಂತ್ ಠಾಕೂರ್ ಭರಿಸಿದ್ದಾಗಿ ತಿಳಿಸುತ್ತಾರೆ.</p>.<p>ಶಾಲೆಯಲ್ಲಿ ಇಬ್ಬರು ಕಾಯಂ ಶಿಕ್ಷಕರು ಇದ್ದೇವೆ. ಕಳೆದ ವರ್ಷ ನಾಲ್ವರು ಅತಿಥಿ ಉಪನ್ಯಾಸಕರು ಇದ್ದರು. ಈ ವರ್ಷ ಐವರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 2025-26ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಸಾಧನೆಗೈದಿದೆ ಎಂದು ಹೇಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-33-2097887299</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಂಜೋಳಖೇಣಿ(ಜನವಾಡ):</strong> ಕಾಯಂ ಶಿಕ್ಷಕರಿಬ್ಬರು ತಮ್ಮ ಸ್ವಂತ ಹಣ ಹಾಗೂ ದಾನಿಗಳ ನೆರವಿನಿಂದ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೊಸ ಕಳೆ ನೀಡಿದ್ದಾರೆ.</p>.<p>ಮುಖ್ಯಶಿಕ್ಷಕ ಮಂಜುನಾಥ ಎನ್.ಆರ್ ಹಾಗೂ ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ್ ಠಾಕೂರ್ ಅವರ ವಿಶೇಷ ಪ್ರಯತ್ನದಿಂದಾಗಿ ಈಗ ಶಾಲೆಯ ಚಿತ್ರಣವೇ ಬದಲಾಗಿದೆ. ಶಾಲೆಯ ಆವರಣದಲ್ಲಿ ಅಂದದ ಉದ್ಯಾನ ಅರಳಿದೆ. ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಆಕರ್ಷಕ ಚಿತ್ರಗಳು ರಚನೆಯಾಗಿವೆ.</p>.<p>₹2 ಲಕ್ಷ ವೆಚ್ಚದಲ್ಲಿ ಶಾಲೆಯಲ್ಲಿ ಉದ್ಯಾನ ನಿರ್ಮಾಣ ಹಾಗೂ ಗೋಡೆಗಳ ಮೇಲೆ ಚಿತ್ರ ರಚನೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸುತ್ತಾರೆ ಮಂಜುನಾಥ ಎನ್.ಆರ್.</p>.<p>ಉದ್ಯಾನದಲ್ಲಿ ನೀರು ಚಿಮ್ಮಿಸುವ ಕಾರಂಜಿ ಕಟ್ಟಿಸಲಾಗಿದೆ. ಹೂವು, ಕರಿಬೇವು, ಅಲಂಕಾರಿಕ, ಔಷಧ ಸಸಿಗಳನ್ನು ನೆಡಲಾಗಿದೆ. ಪಾರ್ಕಿಂಗ್ ಟೈಲ್ಸ್ ಹಾಕಲಾಗಿದೆ. ಗ್ರಾಮದಲ್ಲಿ ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದ ಹಳೆಯ ಶಾಸನಗಳನ್ನು ತಂದು ಸಂರಕ್ಷಿಸಿ ಉದ್ಯಾನದ ಒಳಗೆ ಇಡಲಾಗಿದೆ ಎಂದು ಹೇಳುತ್ತಾರೆ.</p>.<p>ವಿದ್ಯಾರ್ಥಿಗಳು ಬಿಡುವಿನ ಅವಧಿಯಲ್ಲಿ ಉದ್ಯಾನದಲ್ಲಿ ಖುಷಿಯಿಂದ ಓದಬಹುದಾಗಿದೆ ಎಂದು ತಿಳಿಸುತ್ತಾರೆ.</p>.<p>‘ಚಿತ್ರಕಲಾ ಶಿಕ್ಷಕ ವಿಷ್ಣುಕಾಂತ್ ಠಾಕೂರ್ ಅವರು ಚಿತ್ರ ರಚನೆ ಮೂಲಕ ಶಾಲೆಯ ಗೋಡೆಗಳ ಸೌಂದರ್ಯ ಹೆಚ್ಚಿಸಿದ್ದಾರೆ’ ಎಂದು ಹೇಳುತ್ತಾರೆ.</p>.<p>‘ಗೋಡೆಗಳ ಮೇಲೆ ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಬಿದ್ರಿ ಕಲೆ ಚಿತ್ರ ಬಿಡಿಸಲಾಗಿದೆ. ಸರ್ಕಾರದ ಸೌಲಭ್ಯಗಳು, ವಿಷಯವಾರು ಮಾಹಿತಿ ಹಾಗೂ ಪ್ರೇರಣಾತ್ಮಕ ನುಡಿಗಳನ್ನು ಬರೆಯಲಾಗಿದೆ’ ಎಂದು ತಿಳಿಸುತ್ತಾರೆ.</p>.<p>‘ಶಾಲೆಗೆ ಮಕ್ಕಳನ್ನು ಆಕರ್ಷಿಸಲು, ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಹಾಗೂ ಪರಿಸರ ಜಾಗೃತಿ ಮೂಡಿಸಲು ಉದ್ಯಾನ ಹಾಗೂ ಗೋಡೆ ಚಿತ್ರಗಳು ನೆರವಾಗಲಿವೆ’ ಎಂದು ಹೇಳುತ್ತಾರೆ.</p>.<p>ಉದ್ಯಾನ ಹಾಗೂ ಗೋಡೆ ಚಿತ್ರ ರಚನೆಗೆ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು ₹60 ಸಾವಿರ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ₹20 ಸಾವಿರ ದೇಣಿಗೆ ನೀಡಿದ್ದಾರೆ. ಉಳಿದ ₹1.20 ಲಕ್ಷವನ್ನು ತಾನು ಹಾಗೂ ವಿಷ್ಣುಕಾಂತ್ ಠಾಕೂರ್ ಭರಿಸಿದ್ದಾಗಿ ತಿಳಿಸುತ್ತಾರೆ.</p>.<p>ಶಾಲೆಯಲ್ಲಿ ಇಬ್ಬರು ಕಾಯಂ ಶಿಕ್ಷಕರು ಇದ್ದೇವೆ. ಕಳೆದ ವರ್ಷ ನಾಲ್ವರು ಅತಿಥಿ ಉಪನ್ಯಾಸಕರು ಇದ್ದರು. ಈ ವರ್ಷ ಐವರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 2025-26ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಸಾಧನೆಗೈದಿದೆ ಎಂದು ಹೇಳುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-33-2097887299</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>