ಶಿವನಗರ ಫುಟ್ಪಾತ್ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು ನೆಲಹಾಸು ಕಲ್ಲುಗಳನ್ನು ತೆಗೆದು ಜೋಡಿಸಿಟ್ಟಿರುವುದು ಕಾಣಬಹುದು
–ಪ್ರಜಾವಾಣಿ ಚಿತ್ರಗಳು: ಲೋಕೇಶ್ ವಿ. ಬಿರಾದಾರ
ಪಾದಚಾರಿ ಮಾರ್ಗ ಪಾದಚಾರಿ ಮಾರ್ಗವಾಗಿಯೇ ಉಳಿಯಬೇಕು. ಅದರ ಮೇಲೆ ಫುಡ್ಕೋರ್ಟ್ ಸ್ಥಾಪಿಸಿದರೆ ವಾಯುವಿಹಾರಿಗಳಿಗೆ ಸಮಸ್ಯೆಯಾಗುತ್ತದೆ. ಅದರ ಮೂಲ ಉದ್ದೇಶಕ್ಕೆ ಪೆಟ್ಟು ಬೀಳುತ್ತದೆ.
–ಅಶೋಕಕುಮಾರ್ ಕರಂಜಿ, ಸ್ಥಳೀಯ ನಿವಾಸಿ
ಬೀದರ್ನಲ್ಲಿ ಇಷ್ಟೊಂದು ವಿಶಾಲವಾದ ಫುಟ್ಪಾತ್ ಬೇರೊಂದು ಸ್ಥಳದಲ್ಲಿ ಇಲ್ಲ. ಸುಮಾರು ಏಳೆಂಟು ಬಡಾವಣೆಯ ಜನ ವಾಯುವಿಹಾರಕ್ಕೆ ನಿತ್ಯ ಹೋಗುತ್ತಾರೆ. ಹೀಗಿರುವಾಗ ಅಲ್ಲಿ ಫುಡ್ಕೋರ್ಟ್ ಸ್ಥಾಪನೆ ಸರಿಯಲ್ಲ.
–ಗುರುನಾಥ್ ಜ್ಯಾಂತಿಕರ್, ಸ್ಥಳೀಯ ನಿವಾಸಿ
₹4 ಕೋಟಿ ವೆಚ್ಚದಲ್ಲಿ ಶಿವನಗರ ಫುಟ್ಪಾತ್ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಫುಟ್ಪಾತ್ ಕೆಳಗಿನ ಚರಂಡಿಗೆ ಪ್ಲಾಸ್ಟರ್ ಹೊಸ ನೆಲಹಾಸು ವಿದ್ಯುತ್ ದೀಪಗಳನ್ನು ಅಳವಡಿಸಿ ಫುಟ್ಪಾತ್ ಅಭಿವೃದ್ಧಿಪಡಿಸಲಾಗುವುದು. ಫುಡ್ಕೋರ್ಟ್ ನಮ್ಮ ಯೋಜನೆಯಲ್ಲಿಲ್ಲ.