‘ಮಂಗಳವಾರ ಕಲಬುರ್ಗಿ, ಹುಮನಾಬಾದ್, ಭಾಲ್ಕಿ ಹಾಗೂ ಔರಾದ್ಗೆ ಬಸ್ ಸಂಚಾರ ಆರಂಭವಾಗಿದೆ. ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದರೆ ಗ್ರಾಮೀಣ ಪ್ರದೇಶಕ್ಕೂ ಬಸ್ ಓಡಿಸಲಾಗುವುದು. ಕೋವಿಡ್ 19 ಸೋಂಕಿತರು ನಗರದಲ್ಲೇ ಹೆಚ್ಚಿರುವ ಕಾರಣ ನಗರ ಸಾರಿಗೆ ಸೇವೆಯನ್ನು ಆರಂಭಿಸಿಲ್ಲ’ ಎಂದು ಎನ್ಇಕೆಆರ್ಟಿಸಿಯ ಬೀದರ್ ವಿಭಾಗೀಯ ನಿಯಂತ್ರಣ ಅಧಿಕಾರಿ ಸಿ.ಎಸ್.ಫುಲೇಕರ್ ತಿಳಿಸಿದರು.