<p>ಬೀದರ್: ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರ 40ನೇ ಜನ್ಮದಿನದ ಪ್ರಯುಕ್ತ ಇಲ್ಲಿಯ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.</p>.<p>ರಕ್ತದಾನ ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿದೆ. ರಕ್ತದಾನ ಜೀವ ಉಳಿಸುತ್ತದೆ. ರಕ್ತ ಕೊಟ್ಟವರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಪ್ರೊ. ಉಮಾಕಾಂತ ಮೀಸೆ ತಿಳಿಸಿದರು.</p>.<p>ರಕ್ತದಾನ ಮಾಡಿದ ವ್ಯಕ್ತಿಯ ಶರೀರದಲ್ಲಿ ಮೂರು ತಿಂಗಳಲ್ಲಿ ಹೊಸ ರಕ್ತ ಬರುತ್ತದೆ. ರಕ್ತದಾನಿಗೆ ಪುಣ್ಯ ದೊರಕುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಬಿ. ಬಿರಾದಾರ ಹೇಳಿದರು.</p>.<p>ಗುರುಬಸವ ಪಟ್ಟದ್ದೇವರು ನೇರ ನಡೆ-ನುಡಿ ಉಳ್ಳವರಾಗಿದ್ದಾರೆ. ಚನ್ನಬಸವ ಪಟ್ಟದ್ದೇವರ ಮಾರ್ಗದಲ್ಲಿ ಸಾಗಿದ್ದಾರೆ ಎಂದು ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ನುಡಿದರು.</p>.<p>ರಕ್ತದಾನ ಮಾಡಿದ ಸಿದ್ಧಲಿಂಗ ಚಂದ್ರಕಾಂತ, ವಿಜಯಕುಮಾರ, ಉಮೇಶ ಶಾಮರಾವ್, ಸೂರ್ಯಕಾಂತ ಮಾರ್ಜೋಡೆ ಅವರನ್ನು ಸನ್ಮಾನಿಸಲಾಯಿತು.</p>.<p>ಅಪೆಕ್ಸ್ ಆಸ್ಪತ್ರೆಯ ಸೂರ್ಯಕಾಂತ ಕಾರಾಮುಂಗಿ, ಸಂತೋಷ, ಸುರೇಶ, ಬಸವರಾಜ, ಅಶೋಕ ಪಾಟೀಲ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬೀದರ್: ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರ 40ನೇ ಜನ್ಮದಿನದ ಪ್ರಯುಕ್ತ ಇಲ್ಲಿಯ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.</p>.<p>ರಕ್ತದಾನ ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿದೆ. ರಕ್ತದಾನ ಜೀವ ಉಳಿಸುತ್ತದೆ. ರಕ್ತ ಕೊಟ್ಟವರ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಪ್ರೊ. ಉಮಾಕಾಂತ ಮೀಸೆ ತಿಳಿಸಿದರು.</p>.<p>ರಕ್ತದಾನ ಮಾಡಿದ ವ್ಯಕ್ತಿಯ ಶರೀರದಲ್ಲಿ ಮೂರು ತಿಂಗಳಲ್ಲಿ ಹೊಸ ರಕ್ತ ಬರುತ್ತದೆ. ರಕ್ತದಾನಿಗೆ ಪುಣ್ಯ ದೊರಕುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್.ಬಿ. ಬಿರಾದಾರ ಹೇಳಿದರು.</p>.<p>ಗುರುಬಸವ ಪಟ್ಟದ್ದೇವರು ನೇರ ನಡೆ-ನುಡಿ ಉಳ್ಳವರಾಗಿದ್ದಾರೆ. ಚನ್ನಬಸವ ಪಟ್ಟದ್ದೇವರ ಮಾರ್ಗದಲ್ಲಿ ಸಾಗಿದ್ದಾರೆ ಎಂದು ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ನುಡಿದರು.</p>.<p>ರಕ್ತದಾನ ಮಾಡಿದ ಸಿದ್ಧಲಿಂಗ ಚಂದ್ರಕಾಂತ, ವಿಜಯಕುಮಾರ, ಉಮೇಶ ಶಾಮರಾವ್, ಸೂರ್ಯಕಾಂತ ಮಾರ್ಜೋಡೆ ಅವರನ್ನು ಸನ್ಮಾನಿಸಲಾಯಿತು.</p>.<p>ಅಪೆಕ್ಸ್ ಆಸ್ಪತ್ರೆಯ ಸೂರ್ಯಕಾಂತ ಕಾರಾಮುಂಗಿ, ಸಂತೋಷ, ಸುರೇಶ, ಬಸವರಾಜ, ಅಶೋಕ ಪಾಟೀಲ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>