<p><strong>ಬಸವಕಲ್ಯಾಣ:</strong> ಭಾರತೀಯ ವೀರ ಯೋಧರು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಸಿಂಧೂರ ಕಾರ್ಯಾಚರಣೆಗೆ ಯಶಸ್ಸು ಬಯಸಿ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಶುಕ್ರವಾರ ಬಿಜೆಪಿ ನಗರ ಘಟಕದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಮಾತನಾಡಿ, `ಆತಂಕವಾದಿಗಳು ಹಲವಾರು ಜನರ ಹತ್ಯೆ ನಡೆಸಿ ಮಹಿಳೆಯರ ಕುಂಕುಮ ಅಳಿಸಿದ್ದರಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಕಾರ್ಯದಲ್ಲಿ ಭಾರತೀಯ ಸೈನಿಕರಿಗೆ ಜಯವಾಗಲಿ ಎಂದು ಬಸವಣ್ಣನವರು ಮತ್ತು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದರು.</p>.<p>ಮುಖಂಡ ಕೃಷ್ಣಾ ಗೋಣೆ ಮಾತನಾಡಿ, `ಸಮಸ್ತ ಭಾರತವೇ ಯೋಧರ ಹಿಂದಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಸರ್ವರೂ ಬೆಂಬಲಿಸಬೇಕಾಗಿದೆ' ಎಂದರು.</p>.<p>ಪ್ರಮುಖರಾದ ಪ್ರದೀಪ ಬೇಂದ್ರೆ, ಶಿವರಾಜ ಮೆಂಗದೆ, ರಾಜಕುಮಾರ ಅಲಶೆಟ್ಟಿ, ಬಾಬುರಾವ್ ಹಿಂಶೆ, ಸಂಜೀವ ಶಾಶೆಟ್ಟೆ, ವೆಂಕಟೇಶ ಖರಟಮಲ್, ವಿಶ್ವನಾಥ ಚಿರಡೆ, ಕವಿತಾ ಸಜ್ಜನ್, ಸುರೇಖಾ ಅನ್ವಳೆ, ವಿಜಯಲಕ್ಷ್ಮಿ ಚವಾಣ, ಸಾಗರ ಮೇತ್ರೆ, ಸಂತೋಷ ಮದನಸೂರೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ಭಾರತೀಯ ವೀರ ಯೋಧರು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಸಿಂಧೂರ ಕಾರ್ಯಾಚರಣೆಗೆ ಯಶಸ್ಸು ಬಯಸಿ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಶುಕ್ರವಾರ ಬಿಜೆಪಿ ನಗರ ಘಟಕದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಮಾತನಾಡಿ, `ಆತಂಕವಾದಿಗಳು ಹಲವಾರು ಜನರ ಹತ್ಯೆ ನಡೆಸಿ ಮಹಿಳೆಯರ ಕುಂಕುಮ ಅಳಿಸಿದ್ದರಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಕಾರ್ಯದಲ್ಲಿ ಭಾರತೀಯ ಸೈನಿಕರಿಗೆ ಜಯವಾಗಲಿ ಎಂದು ಬಸವಣ್ಣನವರು ಮತ್ತು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದರು.</p>.<p>ಮುಖಂಡ ಕೃಷ್ಣಾ ಗೋಣೆ ಮಾತನಾಡಿ, `ಸಮಸ್ತ ಭಾರತವೇ ಯೋಧರ ಹಿಂದಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ಸರ್ವರೂ ಬೆಂಬಲಿಸಬೇಕಾಗಿದೆ' ಎಂದರು.</p>.<p>ಪ್ರಮುಖರಾದ ಪ್ರದೀಪ ಬೇಂದ್ರೆ, ಶಿವರಾಜ ಮೆಂಗದೆ, ರಾಜಕುಮಾರ ಅಲಶೆಟ್ಟಿ, ಬಾಬುರಾವ್ ಹಿಂಶೆ, ಸಂಜೀವ ಶಾಶೆಟ್ಟೆ, ವೆಂಕಟೇಶ ಖರಟಮಲ್, ವಿಶ್ವನಾಥ ಚಿರಡೆ, ಕವಿತಾ ಸಜ್ಜನ್, ಸುರೇಖಾ ಅನ್ವಳೆ, ವಿಜಯಲಕ್ಷ್ಮಿ ಚವಾಣ, ಸಾಗರ ಮೇತ್ರೆ, ಸಂತೋಷ ಮದನಸೂರೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>