‘ಬಿಜೆಪಿಯ ತತ್ವ, ಸಿದ್ಧಾಂತಗಳು ಎಲ್ಲರಿಗೂ ಇಷ್ಟವಾಗುತ್ತಿವೆ. ಉತ್ತಮ ಆಡಳಿತ ನೋಡಿ ಅನೇಕರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ನಾನು ನುಡಿದಂತೆ ನಡೆಯುವವನು. ನೀವು ಇಟ್ಟಿರುವ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ನಾನು ಗೆದ್ದರೆ ಅನುಕೂಲ ಆಗುತ್ತದೆ’ ಎಂದರು. ಅನಿಲ ಸ್ವಾಮಿ, ರಾಜರೆಡ್ಡಿ, ಸಂಜೀವ ಸುಗೂರೆ, ಶಾಂತಯ್ಯ ಸ್ವಾಮಿ, ಸಂಜೀವ ರಾಜೋಳೆ, ವಿದ್ಯಾಸಾಗರ ಮೂಲಗೆ, ಷಣ್ಮುಖಯ್ಯ ಸ್ವಾಮಿ, ಸಂಜೀವಕುಮಾರ ಪಾಟೀಲ, ತುಕಾರಾಮ ಬಿರಾದಾರ, ರಾಮಲಿಂಗ ಏಕಂಬೆ, ವಿವೇಕಾನಂದ ಮಠಪತಿ ಪಾಲ್ಗೊಂಡಿದ್ದರು. ಕಿಟ್ಟಾ, ಘಾಟಹಿಪ್ಪರ್ಗಾ, ಏಕಲೂರ ಹಾಗೂ ಇಲ್ಲಾಳ ಗ್ರಾಮಗಳಲ್ಲೂ ಪ್ರಚಾರ ಸಭೆ ನಡೆಯಿತು.