ಭಾಲ್ಕಿ: ತಾಲ್ಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸ್ಪರ್ಶಿಸಿ ಎರಡು ಎಮ್ಮೆಗಳು ಸಾವನ್ನಪ್ಪಿವೆ.
ರೈತ ದೀಪಕ ಬಾಬುರಾವ್, ಸಂದೀಪ ಬಾಬುರಾವ್ ಅವರಿಗೆ ಸೇರಿದ್ದ ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮೆಹಕರ್ ಪೊಲೀಸ್ ಠಾಣೆಯ ಪಿಎಸ್ಐ ಸೂರ್ಯಕಾಂತ ಕರಂಜೆ, ಗ್ರಾಮ ಲೆಕ್ಕಾಧಿಕಾರಿ ವೀರಣ್ಣ ಭೇಟಿ ನೀಡಿದರು.