ಬೀದರ್: ವಿದ್ಯಾರ್ಥಿಗಳು ಸಂಶೋಧನಾ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಇಂಡಿಯನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಜಿಜ್ ಖಾನ್ ಸಲಹೆ ಮಾಡಿದರು.
ಇಲ್ಲಿಯ ಚಿದ್ರಿಯಲ್ಲಿ ಇರುವ ಇಂಡಿಯನ್ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯ ಕ್ರಮ ಉದ್ಘಾಟಿಸಿ, ಮಾತನಾಡಿದರು.
ಸಂಶೋಧನೆ ಕೈಗೊಳ್ಳಲು ಬಹಳಷ್ಟು ವಿಷಯಗಳು ಇವೆ. ಜೀವನದ ಗುರಿ ಸ್ಪಷ್ಟವಾಗಿ ಇರಬೇಕು. ಅದಕ್ಕೆ ತಕ್ಕ ಪರಿಶ್ರಮವನ್ನೂ ವಹಿಸಬೇಕು. ಅಂದಾಗ ಮಾತ್ರ ಗುರಿ ತಲುಪಲು ಸಾಧ್ಯವಿದೆ ಎಂದು ಹೇಳಿದರು.
ನರ್ಸಿಂಗ್ ಕಾಲೇಜು ಪ್ರಾಚಾರ್ಯ ಫ್ರಾಂಕ್ಲಿನ್ ಕ್ಯಾಂಟಿಲ್, ಜಾಸ್ಮಿನ್ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಜೀಮ್ ಇದ್ದರು. ಉಪನ್ಯಾಸಕ ಸುನೀಲ್ ಮಾಳಗೆ ನಿರೂಪಿಸಿದರು.