‘ಇಂತಹ ಪುಣ್ಯ ಕಾರ್ಯಕ್ಕೆ ಹಣಕಾಸಿನ ಕೊರತೆಯಾಗದು. ಹಿರಿಯರಾದ ಗೋ.ರು. ಚೆನ್ನಬಸಪ್ಪ, ಅರವಿಂದ ಜತ್ತಿ, ಬಸವರಾಜ ಪಾಟೀಲ ಸೇಡಂ ಹಾಗೂ ಮಠಾಧೀಶರ ಸಲಹೆ ಪಡೆದು ಅನುಭವ ಮಂಟಪಕ್ಕೆ ಸಂಬಂಧಿಸಿದಂತೆ ಏನೇನು ಕೆಲಸ ಆಗಬೇಕು ಅದನ್ನೆಲ್ಲ ಮಾಡಲು ಸರ್ಕಾರ ಸಿದ್ಧವಿದೆ. ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ₹ 100 ಕೋಟಿ ಅನುದಾನ ಕೊಡಲಾಗುವುದು. ನಾಡಿನ ಬಸವ ಭಕ್ತರು ಹಾಗೂ ಮಠಾಧೀಶರ ಆಶಯದಂತೆ ನಿಗದಿತ ಅವಧಿಯಲ್ಲಿ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಲಾಗುವುದು' ಎಂದರು.