ತೋಟಗಾರಿಕೆ ಕಾಲೇಜಿನ ಡಾ. ಅಶೋಕ ಸೂರ್ಯವಂಶಿ ಅವರು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಅಡ್ವೆಂಟಾ ಕಂಪನಿಯ ವಿಜ್ಞಾನಿ ಡಾ. ವಿಜಯಕುಮಾರ, ಯು.ಪಿ.ಎಲ್ ಕಂಪನಿಯ ಸಂಗಮೇಶ ಬಿರಾದಾರ, ಟಿ.ಆರ್.ಎ ಬಯೊಟೆಕ್ನ ಕೃಷ್ಣ ಇದ್ದರು. ಬೀದರ್, ಕಲಬುರ್ಗಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮೈಸೂರು, ಮೂಡಿಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯ ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.