ಗುತ್ತಿ (ಹುಲಸೂರ): ಗ್ರಾಮದ ಬುದ್ಧ ಭವನದ ಆವರಣದಲ್ಲಿ ಗ್ರಾಮಸ್ಥರು ಸಂವಿಧಾನ ದಿನ ಆಚರಿಸಿದರು.
ಆಲ್ ಇಂಡಿಯಾ ಪ್ಯಾಂಥರ್ ಸೇನಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಫುಲ್ಲ ಸೂರ್ಯವಂಶಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂವಿಧಾನದ ಪೂರ್ವ ಪೀಠಿಕೆ ಪಠಿಸುವ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಗಾಯಕವಾಡ, ಅಂಗನವಾಡಿ ಕಾರ್ಯಕರ್ತೆ ಚಿನ್ನಮ್ಮ ಸೂರ್ಯವಂಶಿ, ದಲಿತ ಫ್ಯಾಂಥರ್ ಗ್ರಾಮ ಘಟಕದ ಅಧ್ಯಕ್ಷ ಮಲ್ಲೇಶ ಗಾಯಕವಾಡ, ಮಾಧವ ಸೋಮವಂಶಿ, ಪ್ರದೀಪ್ ಗಾಯಕವಾಡ, ಗಣೇಶ ಗಾಯಕವಾಡ, ಅವಿನಾಶ ಸೂರ್ಯವಂಶಿ ಹಾಗೂ ನರಸಿಂಗ ಗಾಯಕವಾಡ ಇದ್ದರು