ಹುಲಸೂರ: ಪಟ್ಟಣದ ತಹಶೀಲ್ದಾರ್ಕಚೇರಿಯಲ್ಲಿ ಶುಕ್ರವಾರ ಸಂವಿಧಾನ ದಿನ ಆಚರಿಸಲಾಯಿತು.
ತಹಶೀಲ್ದಾರ್ ಶಿವಾನಂದ ಮೇತ್ರೆ ಅವರು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಎಂ.ಜಿ ರಾಜೋಳೆ, ದತ್ತು ಅಲಗೊಡಕರ, ಉಪ ತಹಶೀಲ್ದಾರ್ ಸಂಜು ಭೈರೆ, ಗ್ರಾ.ಪಂ. ಸದಸ್ಯ ಗುಲಾಮ ಬಡಾಯಿ, ದಿನೇಶ ಮಂಗ, ಗಿರೀಶ ಮೆಹಕರೆ ಸೇರಿ ಹಲವರು ಭಾಗವಹಿಸಿದ್ದರು.