ಆರೋಪಿಯು 2016ರ ಏಪ್ರಿಲ್ 24 ರಂದು ಮನ್ನಾಎಖ್ಖೆಳ್ಳಿಯಲ್ಲಿ ಡಾ.ಅಂಬೇಡ್ಕರ್ ಪ್ರತಿಮೆಯ ಮುಂಭಾಗದ ಟೈಲ್ಸ್ಗಳನ್ನು ತೆಗೆದು ಅಲ್ಲಿದ್ದ ಲೈಟ್ಗಳನ್ನು ಒಡೆದು ಹಾಕಿದ್ದ. ಪ್ರತಿಮೆ ಬಳಿ ಚಪ್ಪಲಿ ಇಟ್ಟು ಅವಮಾನ ಮಾಡಿದ್ದ. ಮನ್ನಾಎಖ್ಖೆಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.