‘ತಮ್ಮ ವ್ಯಾಪ್ತಿಯ ಗ್ರಾಮಗಳು ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಬಯಲುಶೌಚ ಮುಕ್ತ ಎಂದು ಶಾಸಕರು, ಸ್ಥಳೀಯಾಡಳಿತ ಪ್ರಮಾಣೀಕರಿಸಿದರೆ ಮಾತ್ರ ಉಚಿತ ಅಕ್ಕಿ ಪೂರೈಕೆ ಮಾಡಲಾಗುವುದು. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೇ ಉಚಿತ ಅಕ್ಕಿ ಪೂರೈಕೆಯಾಗುತ್ತಿದ್ದು, ಬೆಳಿಗ್ಗೆಯ ಸುತ್ತಾಟದ ಸಂದರ್ಭ ಕಂಡು ಬಂದ ದೃಶ್ಯವಿದು’ ಎಂದು ತ್ಯಾಜ್ಯದ ರಾಶಿಗಳ ಚಿತ್ರವನ್ನು ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.