ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ ಕಾರಣ ಅನೇಕರು ಗುರುವಾರ ಅಂಗಡಿಗಳನ್ನು ತೆರೆಯಲಿಲ್ಲ. ಆದ್ದರಿಂದ ವ್ಯಾಪಾರ ವಹಿವಾಟು ಅಷ್ಟಕಷ್ಟೇ ನಡೆಯಿತು. ಬಹಳಷ್ಟು ಹೋಟೆಲ್, ಡಾಬಾ, ಖಾನಾವಳಿಗಳಲ್ಲಿ ಬರೀ ಪಾರ್ಸಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಚಹಾ ಅಂಗಡಿಗಳ ಬಾಗಿಲುಗಳಿಗೆ ದಾರ ಹಾಗೂ ಸಲಾಕೆಗಳನ್ನು ಅಳವಡಿಸಿ ದೂರದಿಂದಲೇ ಚಹಾ, ನೀರು ಕೊಡುತ್ತಿರುವುದು ಕಂಡು ಬಂತು.