ಮಂಗಳೂರ ವ್ಯಾಪ್ತಿಯಲ್ಲಿ 500 ಎಕರೆಯಷ್ಟು ಅರಣ್ಯವಿದೆ. 1 ಸಾವಿರ ಎಕರೆ ಸಾಗುವಳಿ ಜಮೀನಿದೆ. ಅರಣ್ಯದಲ್ಲಿನ ಹಂದಿಗಳು ಹಿಂಡುಹಿಂಡಾಗಿ ಹೊಲಗಳಿಗೆ ಹಾಗೂ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸಿವೆ. ಅನೇಕರ ಕಬ್ಬಿನ ದಂಟುಗಳನ್ನು ಕಡಿದು ತಿಂದಿವೆ. ತರಕಾರಿ, ಸೋಯಾಬಿನ್, ತೊಗರಿ, ಹೆಸರು ಹಾಗೂ ಉದ್ದು ಮೊಡಕೆ ಒಡೆಯುವಷ್ಟರಲ್ಲಿಯೇ ಕಿತ್ತು ತಿನ್ನುತ್ತಿವೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ.