ಜನವಾಡ: ಬೀದರ್ ತಾಲ್ಲೂಕಿನ ಫತೇಪುರದ ಶಾಂತಲಿಂಗ ಶಿವಯೋಗಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಮಾನ್ಯ ಯೋಜನೆಯಡಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಸಭಿಕರ ಮನ ರಂಜಿಸಿತು.
ಕಲಾವಿದ ವಿಶ್ವನಾಥ ಗುಣಶೆಟ್ಟೆ ಅವರು ಜಾನಪದ, ಭಕ್ತಿ ಹಾಗೂ ಭಾವಗೀತೆಗಳನ್ನು ಸುಮಧುರವಾಗಿ ಹಾಡಿದರು.
ಉದ್ಘಾಟನೆ ನೆರವೇರಿಸಿದ ಪ್ರಮುಖರಾದ ಶಿವಬಸಪ್ಪ ಪಾಟೀಲ ಅವರು, ಜಾನಪದ ಕಲೆ ಹಾಗೂ ಸಂಸ್ಕೃತಿ ಉಳಿವಿಗೆ ಪೂರಕವಾದ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ಹೇಳಿದರು.
ನರಸಿಂಗರಾವ್ ಸುತಾರ್ ಅಧ್ಯಕ್ಷತೆ ವಹಿಸಿದ್ದರು. ರಾಜು ಸ್ವಾಮಿ, ವಿಶ್ವನಾಥ ಹಣಮಂತ ನಾವದಗೇರಿ ಉಪಸ್ಥಿತರಿದ್ದರು.