ಬೀದರ್: ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ. ಈ ವಾರ ರೈತರು ಆತಂಕದಲ್ಲಿದ್ದರೆ, ಗ್ರಾಹಕರು ಸಂತಸದಲ್ಲಿದ್ದಾರೆ.
ನುಗ್ಗೆಕಾಯಿ ಬೆಲೆ ಅರ್ಧದಷ್ಟು ಇಳಿದಿದೆ. ನಾಲ್ಕು ವಾರಗಳ ಹಿಂದೆ ಪ್ರತಿ ಕೆ.ಜಿಗೆ ₹ 100 ದಾಟಿದ್ದ ನುಗ್ಗೆಕಾಯಿ ಬೆಲೆ ಈಗ ₹ 50ಕ್ಕೆಇಳಿದಿದೆ. ಈರುಳ್ಳಿ ಬೆಲೆಯೂ₹30ಗೆ ಇಳಿದಿದೆ. ಬೆಳ್ಳುಳ್ಳಿ ಬೆಲೆ ಸ್ಥಿರವಾಗಿದೆ.
ಪಾಲಕ ಸೊಪ್ಪು, ಟೊಮೆಟೊ, ಕೊತಂಬರಿ, ಬೀಟ್ರೂಟ್ ಹಾಗೂ ಹೂಕೋಸು ಬೆಲೆ ಪ್ರತಿ ಕೆಜಿಗೆ ₹ 10 ಕಡಿಮೆಯಾಗಿದೆ. ಎಲೆಕೋಸು ಬೆಲೆ ಮಾತ್ರ ಪ್ರತಿ ಕೆ.ಜಿಗೆ ₹ 10 ಹೆಚ್ಚಾಗಿದೆ. ಇನ್ನುಳಿದ ಆಲೂಗಡ್ಡೆ, ಬದನೆಕಾಯಿ, ಸಬ್ಬಸಗಿ, ತೊಂಡೆಕಾಯಿ, ಕರಿಬೇವು ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಸ್ಥಳೀಯ ಮಾರುಕಟ್ಟೆಗೆ ಹೈದರಾಬಾದ್ನಿಂದ ಎಲೆಕೋಸು, ಹೂಕೋಸು, ಗಜ್ಜರಿ , ಬೀನ್ಸ್ , ಬೆಂಡೆಕಾಯಿ, ಮೆಣಸಿನ ಕಾಯಿ ಆವಕವಾಗಿವೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿವೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಟೊಮೆಟೊ, ಬದನೆಕಾಯಿ, ಹಿರೇಕಾಯಿ, ಪಾಲಕ, ಮೆಂತೆ ಹಾಗೂ ಸಬ್ಬಸಗಿ, ಮಾರುಕಟ್ಟೆಗೆಬಂದಿವೆ ಎಂದು ತರಕಾರಿವ್ಯಾಪಾರಿ ವಿಜಯಕುಮಾರ ಕಡ್ಡಿ ಹೇಳುತ್ತಾರೆ.