ರಾಜ್ಯ ಪ್ರಾಣಿ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಪ.ಪಂ. ಮುಖ್ಯಾಧಿಕಾರಿ ಶಿವಕುಮಾರ ಘಾಟೆ, ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ, ರಾಮಶೆಟ್ಟಿ ಪನ್ನಾಳೆ, ರತಿಕಾಂತ ಮಜಗೆ, ಶ್ರೀಮಂತ ಪಾಟೀಲ, ವಿಶ್ವನಾಥ ಸ್ವಾಮಿ, ರಿಯಾಜ್ ಪಾಷಾ, ಸೂರ್ಯಕಾಂತ ರ್ಯಾಕಲೆ, ಬಸವರಾಜ ಶೆಟಕಾರ, ಅಶೋಕ ಶೆಂಬೆಳ್ಳಿ, ಹಾವಪ್ಪ ಶೆಂಬೆಳ್ಳಿ, ಬಸವರಾಜ ಹಳ್ಳೆ, ಹಣಮಂತ ನವಾಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಜಾಥಾ ಹೊರಟ ಅವಳಿ ಸಹೋದರನ್ನು ಅಮರೇಶ್ವರ ದೇವಸ್ಥಾನದಿಂದ ಕನ್ನಡಾಂಬೆ ವೃತ್ತದವರೆಗೆ ಮೆರವಣಿಗೆ ಮೂಲಕ ಬೀಳ್ಕೊಟ್ಟರು. ದಾರಿಯೂದ್ದಕ್ಕೂ ಸಂತಪುರ, ಮುಸ್ತಾಪುರ, ಕೌಡಗಾಂವ, ಕೌಠಾ ಗ್ರಾಮಸ್ಥರು ಜಾಥಾಗೆ ಸ್ವಾಗತಿಸಿ ಬಾಲಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.