ಜುಲೈ 23 ರಂದು ಔರಾದ್ ತಾಲ್ಲೂಕು ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿ ಮರಳಿ ಬೀದರ್ಗೆ ಬರುತ್ತಿದ್ದಾಗ ಗ್ರಾಮದ ಹೊರಗೆ ಹೆಣ್ಣುಮಕ್ಕಳು ಕೊಳವೆಬಾವಿಗೆ ಪಂಪ್ ಮಾಡಿ ನೀರು ಒಯ್ಯುತ್ತಿದ್ದರು. ತಕ್ಷಣ ವಾಹನ ನಿಲ್ಲಿಸಿ ಜಿಲ್ಲಾಧಿಕಾರಿ ಅವರ ಸಮಸ್ಯೆ ಆಲಿಸಿದರು. ಆಗ ಮಹಿಳೆಯರು ‘ಈ ಕೊಳವೆ ಬಾವಿ ಬತ್ತಿ ಹೋಗಿತ್ತು. ಮಳೆ ಚೆನ್ನಾಗಿ ಸುರಿದಿರುವ ಕಾರಣ ಈಗ ನೀರು ಬಂದಿದೆ. ಹೀಗಾಗಿ ಇಲ್ಲಿಂದ ನೀರು ಒಯ್ಯುತ್ತಿದ್ದೇವೆ’ ಎಂದು ತಿಳಿಸಿದರು.