ಬೀದರ್: ರಾಜ್ಯ ಸರ್ಕಾರ ರೈತರ ಜಮೀನು ಸರ್ವೇ ನಡೆಸಿ ಫೋಡಿಮುಕ್ತ ಗ್ರಾಮಗಳ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಬಗರ್ಹುಕುಂ ಭೂಮಿ ಸಕ್ರಮಕ್ಕೆ ಫಾರ್ಮ್ ಸಂಖ್ಯೆ 57 ಅನ್ನು ಮತ್ತೆ ಮಾನ್ಯ ಮಾಡಬೇಕು. ಮಳೆಯಿಂದ ಆಗಿರುವ ಬೆಳೆ ನಷ್ಟ ಸಮೀಕ್ಷೆ ನಡೆಸಬೇಕು. ಹಾಳಾದ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.
ಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹಮ್ಮದ್, ಅಲಿ ಅಹಮ್ಮದ್ ಖಾನ್, ಖಮರ್ ಪಟೇಲ್, ಬಸವರಾಜ ಪಾಟೀಲ, ಗುರುಪಾದಯ್ಯ ಸ್ವಾಮಿ, ಶೇಖ ನವಾಜ್, ಪಪ್ಪುರಾಜ್ ಮೇತ್ರೆ, ಶಫಾಯತ್ ಅಲಿ, ಪ್ರಭು ತಗಣಿಕರ್, ಇಮಾನುವೆಲ್ ಭಾಗವಹಿಸಿದ್ದರು.