ಬೀದರ್: ಇಲ್ಲಿಯ ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಕಚೇರಿಯಲ್ಲಿ ದೀಪ ಪೂಜನ ಕಾರ್ಯಕ್ರಮ ನಡೆಯಿತು.
ಮಾತೆಯರು ಮನೆ, ಮನಗಳನ್ನು ಬೆಳಗಿಸುವ ದೀಪವಾಗಬೇಕು ಎಂದು ಹುಮನಾಬಾದ್ನ ರಾಜರಾಜೇಶ್ವರಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಉಪನ್ಯಾಸಕ ಪ್ರೊ. ಪರಮೇಶ್ವರ ಭಟ್ ಹೇಳಿದರು.
ಸಮಿತಿಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಸ್ವಾಮಿ ಚಿದ್ರಿಮಠ ದೀಪ ಪೂಜೆ ನಡೆಸಿಕೊಟ್ಟರು. ಜ್ಯೋತಿ ಅಮರೇಶ್ವರ ಸ್ವಾಗತಿಸಿದರು. ಜಗದೇವಿ ವಂದಿಸಿದರು.