ಬೀದರ್: ಬಸವಕಲ್ಯಾಣ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ನಂತರವೂ ಪಕ್ಷಗಳಲ್ಲಿನ ಗೊಂದಲ ಕಡಿಮೆಯಾಗಿಲ್ಲ. ಮುಖಂಡರ ಸ್ಥಾನ ಪಲ್ಲಟ ಮುಂದುವರಿದರೆ, ಬಂಡಾಯ ಅಭ್ಯರ್ಥಿಗಳು ಬಹಿರಂಗವಾಗಿ ಸೆಡ್ಡು ಹೊಡೆದು ಪಕ್ಷಗಳಿಗೆ ತಲೆ ನೋವಾಗಿದ್ದಾರೆ. ಮೂಲ ಪಕ್ಷ ಬಿಟ್ಟಿಲ್ಲ ಎಂದು ಹೇಳುವ ಮೂಲಕ ಮತದಾರರಲ್ಲೂ ಗೊಂದಲ ಸೃಷ್ಟಿಸಿದ್ದಾರೆ.