ಈ ಕುರಿತು ಮುಖ್ಯಮಂತ್ರಿ ಮತ್ತು ಜಿಲ್ಲೆಯ ಸಂಸದರಿಗೆ ಪತ್ರ ಬರೆದಿರುವ ಅವರು, ಕಳೆದ 3 ವರ್ಷಗಳ ಹಿಂದೆಯೇ ಜಿಲ್ಲೆಗೆ ಸಿಪೆಟ್ ಮಂಜೂರಾಗಿದ್ದರೂ, ಈ ವಿಷಯವನ್ನು ಇಷ್ಟು ವರ್ಷ ಬಹಿರಂಗ ಪಡಿಸದೆ ಮುಚ್ಚಿಟ್ಟಿರುವ ಸರ್ಕಾರದ ನಿಲುವ ಬೇಸರ ತರಿಸಿದೆ. ಈ ವಿಚಾರವನ್ನು ಜಿಲ್ಲೆಯ 6 ವಿಧಾನಸಭಾ ಸದಸ್ಯರು ಮತ್ತು 4 ವಿಧಾನ ಪರಿಷತ್ ಸದಸ್ಯರು ಸೇರಿ 10 ಶಾಸಕರ ಗಮನಕ್ಕೆ ತಂದಿದ್ದರೆ, ಅದು ಕಾರ್ಯಗತವಾಗುತ್ತಿತ್ತು. ಈ ವಿಳಂಬಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ.