ಬೀದರ್: ಬೆಂಗಳೂರಿನ ರಾಜಭವನದ ಗೋಶಾಲೆಗೆ ಸೋಮವಾರ ಬೀದರ್ ಜಿಲ್ಲೆಯ ದೇವಣಿ ತಳಿಯ ಹಸುಗಳು ಸೇರ್ಪಡೆಯಾಗಿವೆ.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ರಾಜಭವನಕ್ಕೆ ಆಗಮಿಸಿದ ಗೋವುಗಳಿಗೆ ಪೂಜೆ ಮಾಡಿ ಹಣ್ಣು ತಿನ್ನಿಸಿ ಬರ ಮಾಡಿಕೊಂಡರು.
ದೇಸಿ ಗೋವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದೇಶಿ ತಳಿಗಳ ಬದಲಾಗಿ ದೇಸಿಯ ತಳಿಗಳ ಸಾಕಾಣಿಕೆಗೆ ಪ್ರೇರಣೆ ನೀಡಲು ರಾಜಭವನಕ್ಕೆ ಎರಡು ದೇವಣಿ ಹಸುಗಳನ್ನು ತರಲಾಗಿದೆ ಎಂದರು.