ಬೀದರ್: ಸಮೃದ್ಧಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ವತಿಯಿಂದ ನೀಡಲಾಗುವ ಕೋವಿಡ್ ಸುರಕ್ಷಾ ಕಿಟ್ಗಳನ್ನು ನಗರದಲ್ಲಿ ಕಾರ್ಮಿಕರಿಗೆ ವಿತರಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಗಣಪತಿ ಹಾಲೇಪುರ್ಗೆಕರ್ ಅವರ ಮುಂದಾಳತ್ವದಲ್ಲಿ ನೌಬಾದ್ ಹಾಗೂ ಚಿದ್ರಿಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ 200 ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಶ್ ಲಿಕ್ವಿಡ್ ಹಾಗೂ ಸಾಬೂನು ಒಳಗೊಂಡ ಕಿಟ್ ವಿತರಣೆ ಮಾಡಿದರು.
ಕೋವಿಡ್ ಸೋಂಕಿನ ಕಾರಣ ಕಾರ್ಮಿಕರ ಸುರಕ್ಷತೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಗಣಪತಿ ಹಾಲೇಪುರ್ಗೆಕರ್ ತಿಳಿಸಿದರು.
ಕಾಮಗಾರಿ ಸ್ಥಳಗಳಿಗೆ ತೆರಳಿ ಕಾರ್ಮಿಕರಿಗೆ ಕಿಟ್ ಕೊಡಲಾಗುತ್ತಿದೆ. ಕೋವಿಡ್ ಸುರಕ್ಷತಾ ನಿಯಮಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಂಘದ ನಗರ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹಾಲೇಪುರ್ಗೆಕರ್, ಉಪಾಧ್ಯಕ್ಷ ಮಿಲಿಂದ ಕಾಂಬಳೆ, ಕಾರ್ಯದರ್ಶಿ ರಾಹುಲ್ ಹಾಲೇಪುರ್ಗೆಕರ್, ಸಹ ಕಾರ್ಯದರ್ಶಿ ಉತ್ತಮ ಪ್ರೇಸಿಕರ್, ಸಂಜುಕುಮಾರ ಹಾಲೇಪುರ್ಗೆಕರ್, ಅನಿಲ್, ಸಾವನಕುಮಾರ, ಆಕಾಶ, ಗೌತಮ, ಫರಿದ್ಖಾನ್, ರಿಯಾಜ್ಖಾನ್ ಇದ್ದರು.