‘ಗ್ರಂಥಗಳನ್ನು ಪ್ರಕಟಿಸಿ ಹಿರೇಮಠ ಸಂಸ್ಥಾನದಿಂದ ಉತ್ತಮ ಕಾರ್ಯಗೈಯಲಾಗುತ್ತಿದೆ. ಕಾಶಿನಾಥರೆಡ್ಡಿ ಅವರು ಜಾನಪದ ವಿದ್ವಾಂಸರಾಗಿದ್ದು, ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕುವಂತೆ ಪ್ರಯತ್ನಿಸುತ್ತೇನೆ. ಜಾನಪದಕಾಶಿ ಗ್ರಂಥ ಉತ್ತಮವಾಗಿ ಮೂಡಿಬಂದಿದೆ. ಸಂಪಾದಕ ಡಾ.ಗವಿಸಿದ್ದಪ್ಪ ಪಾಟೀಲ ಅವರು ಈ ಬೃಹತ್ ಗ್ರಂಥದಲ್ಲಿ ಕಾಶಿನಾಥರೆಡ್ಡಿ ಅವರ ಬಗೆಗೆ ಸಮಗ್ರ ಮಾಹಿತಿ ಒದಗಿಸಿದ್ದಾರೆ.