ಬೀದರ್: ನಗರದ ಹೂಗೇರಿಯಲ್ಲಿ ಮಂಗಳವಾರ ಬೀದಿನಾಯಿಯೊಂದು ಎಂಟು ಜನರನ್ನು ಕಚ್ಚಿ ಗಾಯಗೊಳಿಸಿದೆ.
ಹೂಗೇರಿಯ ಸೂರ್ಯ ಲೋಕೇಶ (2), ಸಂಗಮ್ಮ ಶಂಕ್ರೆಪ್ಪ (65), ರಾಜಕುಮಾರ ಮಲಕಪ್ಪ (18) ಹಾಗೂ ಅಶೋಕ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ಪಡೆದು ಮನೆಗೆ ತೆರಳಿದ್ದಾರೆ.
ನಾಯಿ ಕಚ್ಚಿದ ತಕ್ಷಣ ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲು ಔಷಧಿ ಇರಲಿಲ್ಲ. ಹೀಗಾಗಿ ರೋಗಿಗಳ ಸಂಬಂಧಿಕರು ಖರೀದಿಸಿ ತಂದಿದ್ದ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ನೀಡಿ ಕಳಿಸಲಾಯಿತು. ಇನ್ನುಳಿದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು.