<p>ಭಾಲ್ಕಿ: ‘ಮಾನಸಿಕ ನೆಮ್ಮದಿಗೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು’ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.</p>.<p>ಇಲ್ಲಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರೇಮಠದ ವತಿಯಿಂದ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಇಷ್ಟಲಿಂಗ ನಿರಾಕಾರ ಪರಮಾತ್ಮನ ಕುರುಹು. ಶರಣರಿಗೆ ನಿತ್ಯವೂ ಶಿವರಾತ್ರಿಯಾಗಿದೆ. ನಾವು ಪ್ರತಿದಿನ ವ್ಯಕ್ತಿಗತ ಲಿಂಗಪೂಜೆ ಮಾಡಿಕೊಳ್ಳುತ್ತೇವೆ. ಮಹಾಶಿವರಾತ್ರಿಯಂದು ಸಾಮೂಹಿಕವಾಗಿ ಲಿಂಗಪೂಜೆ ಮಾಡಿಕೊಳ್ಳುತ್ತೇವೆ. ಸಾಮೂಹಿಕ ಲಿಂಗಪೂಜೆ ಮಾಡಿಕೊಳ್ಳುವುದರಿಂದ ನಮೆಲ್ಲರಲ್ಲಿ ದೈವಿಕಳೆ, ಸಹನೆ, ತಾಳ್ಮೆ, ಕರುಣೆ, ಪ್ರೀತಿ ಮುಂತಾದ ಗುಣಗಳು ಬೆಳೆದು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು.</p>.<p>ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.</p>.<p>ಸುಶೀಲಾದೇವಿ ವೈಜಿನಾಥ ಉಪ್ಪಿನ್, ಸುನಿಲಕುಮಾರ ಹೊನ್ನಾಳೆ, ಚಂದ್ರಕಾಂತ ಪಾಟೀಲ, ಕೀರ್ತಿ ಶಶಿಧರ ಕೊಸಂಬೆ, ಜೈಪ್ರಕಾಶ ಕುಂಬಾರ, ರಮೇಶ ಕರಕಾಳೆ ಹಾಗೂ ರಾಜಕುಮಾರ ಹೊಸದೊಡ್ಡೆ ಇದ್ದರು.</p>.<p>ಎಸ್.ಎಂ.ಖಾದ್ರಿ, ಶಿವಕುಮಾರ ಪಂಚಾಳ, ನವಲಿಂಗ ಪಾಟೀಲ, ಯಲ್ಲನಗೌಡ ವಚನ ಸಂಗೀತ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾಲ್ಕಿ: ‘ಮಾನಸಿಕ ನೆಮ್ಮದಿಗೆ ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು’ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.</p>.<p>ಇಲ್ಲಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರೇಮಠದ ವತಿಯಿಂದ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಇಷ್ಟಲಿಂಗ ನಿರಾಕಾರ ಪರಮಾತ್ಮನ ಕುರುಹು. ಶರಣರಿಗೆ ನಿತ್ಯವೂ ಶಿವರಾತ್ರಿಯಾಗಿದೆ. ನಾವು ಪ್ರತಿದಿನ ವ್ಯಕ್ತಿಗತ ಲಿಂಗಪೂಜೆ ಮಾಡಿಕೊಳ್ಳುತ್ತೇವೆ. ಮಹಾಶಿವರಾತ್ರಿಯಂದು ಸಾಮೂಹಿಕವಾಗಿ ಲಿಂಗಪೂಜೆ ಮಾಡಿಕೊಳ್ಳುತ್ತೇವೆ. ಸಾಮೂಹಿಕ ಲಿಂಗಪೂಜೆ ಮಾಡಿಕೊಳ್ಳುವುದರಿಂದ ನಮೆಲ್ಲರಲ್ಲಿ ದೈವಿಕಳೆ, ಸಹನೆ, ತಾಳ್ಮೆ, ಕರುಣೆ, ಪ್ರೀತಿ ಮುಂತಾದ ಗುಣಗಳು ಬೆಳೆದು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು.</p>.<p>ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.</p>.<p>ಸುಶೀಲಾದೇವಿ ವೈಜಿನಾಥ ಉಪ್ಪಿನ್, ಸುನಿಲಕುಮಾರ ಹೊನ್ನಾಳೆ, ಚಂದ್ರಕಾಂತ ಪಾಟೀಲ, ಕೀರ್ತಿ ಶಶಿಧರ ಕೊಸಂಬೆ, ಜೈಪ್ರಕಾಶ ಕುಂಬಾರ, ರಮೇಶ ಕರಕಾಳೆ ಹಾಗೂ ರಾಜಕುಮಾರ ಹೊಸದೊಡ್ಡೆ ಇದ್ದರು.</p>.<p>ಎಸ್.ಎಂ.ಖಾದ್ರಿ, ಶಿವಕುಮಾರ ಪಂಚಾಳ, ನವಲಿಂಗ ಪಾಟೀಲ, ಯಲ್ಲನಗೌಡ ವಚನ ಸಂಗೀತ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>