ಎನ್.ಆರ್.ಮೊಹಲ್ಲಾದ ಎಸ್.ಎಂ.ಸಜ್ಜಾದ್ ಎಂಬುವರ ಪುತ್ರ ಸೈಯದ್ ಆಸಿಂ (21), ಹುಣಸೂರಿನ ನಸ್ರುಲ್ಲಾ ಅವರ ಪುತ್ರ ಮೊಹಮ್ಮದ್ ಫರಾನ್ (21) ಹಾಗೂ ಟಿ.ಕೆ.ಬಡಾವಣೆ ವೀರೇಶ್ ಎಂಬುವರ ಪುತ್ರಿ ದಿವ್ಯಾ (20) ಮೃತಪಟ್ಟವರು. ಹುಣಸೂರಿನ ರೆಯಾನ್ ಉಲ್ ರೆಹಮಾನ್ (22) ಹಾಗೂ ಕುವೆಂಪುನಗರದ ಸ್ಫೂರ್ತಿ (21) ಗಾಯಗೊಂಡಿದ್ದು, ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.