ಬೀದರ್: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೆ.29ರಂದು ಬೀದರ್ ಜಿಲ್ಲೆಗೆ ಬರಲಿದ್ದಾರೆ.
ಕಲಬುರ್ಗಿಯಿಂದ ಹೊರಟು ಬೆಳಿಗ್ಗೆ 8 ಗಂಟೆಗೆ ಹೊರಟು 10 ಗಂಟೆಗೆ ಬೀದರ್ಗೆ ಬರುವರು. ನಂತರ ಬೀದರ್ ತಾಲ್ಲೂಕಿನ ಯಾಕತಪುರದ ಇನ್ಫಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುವರು. ಪಾಲಕರೊಂದಿಗೂ ಸಮಾಲೋಚನೆ ನಡೆಸಲಿದ್ದಾರೆ.
ತದನಂತರ ಕಮಲನಗರ ತಾಲ್ಲೂಕಿನ ತೋರಣಾದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಮಲನಗರದ ಸಿದ್ದಗಂಗಮ್ಮ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟು ಗಾಮಸ್ಥರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲಿದ್ದಾರೆ. ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ.
ಸಂಜೆ 4 ಗಂಟೆಗೆ ಬೀದರ್ಗೆ ಬಂದು ಹುಮನಾಬಾದ್ ಮಾರ್ಗವಾಗಿ ಕಲಬುರ್ಗಿಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಚಿದಂಬರ ಪಿ.ಎಂ. ತಿಳಿಸಿದ್ದಾರೆ.