<p><strong>ಬೀದರ್</strong>: ಶಾಲೆಗಳಿಗೆ ತಳಿರು ತೋರಣದ ಅಲಂಕಾರ, ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ನಿಂತು ಮಕ್ಕಳ ಮೇಲೆ ಹೂಮಳೆ, ಗುಲಾಬಿ ಹೂ ಕೊಟ್ಟು ಶಾಲೆಗೆ ಸ್ವಾಗತ, ಮತ್ತೆ ಶಾಲೆಗೆ ಬಂದ ಖುಷಿ, ಸಹಪಾಠಿಗಳನ್ನು ಕಂಡು ಸಂಭ್ರಮಿಸಿದ ಚಿಣ್ಣರು.</p>.<p>ಶಾಲಾ ಆರಂಭೋತ್ಸವದ ಅಂಗವಾಗಿ ನಗರ ಸೇರಿದಂತೆ ಹಲವು ಸರ್ಕಾರಿ, ಅನುದಾನ ಸಹಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಗುರುವಾರ ಕಂಡು ಬಂದ ದೃಶ್ಯಗಳಿವು.</p>.<p>ಬೆಳಿಗ್ಗೆಯಿಂದ ಕಾರ್ಮೋಡ ಕವಿದ ವಾತಾವರಣ ಇತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ಚದುರಿದ ರೀತಿಯಲ್ಲಿ ಮಳೆ ಹನಿಗಳು ಉದುರುತ್ತಿದ್ದವು. ಅದರ ನಡುವೆ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲೆಯ ಎಲ್ಲ ಸಿಬ್ಬಂದಿ ಹೂಮಳೆಗರೆದು ಸ್ವಾಗತಿಸಿದರು. ಗುಲಾಬಿ ಹೂ ಕೊಟ್ಟು ‘ಸ್ವಾಗತ ಮಕ್ಕಳೇ’ ಎಂದು ಹರ್ಷೋದ್ಘಾರ ತೆಗೆದಾಗ ಚಿಣ್ಣರಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಚಾಕಲೇಟ್ ಹಾಗೂ ಬಿಸ್ಕತ್ ಕೊಟ್ಟಾಗ ಅವರ ಸಂಭ್ರಮ ಇಮ್ಮಡಿಸಿತು. ಅದರಲ್ಲೂ ಕಳೆದೆರಡು ತಿಂಗಳ ನಂತರ ಸಹಪಾಠಿಗಳನ್ನು ಮೊದಲ ಬಾರಿ ಭೇಟಿ ಮಾಡಿದ ಪುಳಕ.</p>.<p>ಬಳಿಕ ಅವರಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಹೊಸ ಪುಸ್ತಕಗಳು ಕೈಸೇರಿದ ನಂತರ ಎಲ್ಲರ ಮುಖಗಳು ಮತ್ತಷ್ಟು ಅರಳಿದವು. ಮೊದಲ ದಿನ ತರಗತಿಗಳು ಇರದ ಕಾರಣ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಕಾಲ ಕಳೆದರು.</p>.<p>ರಜೆಯ ಅಂಗವಾಗಿ ಕಳೆದ ಎರಡು ತಿಂಗಳಿಂದ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದರು. ಚಿಣ್ಣರ ಆಗಮನದೊಂದಿಗೆ ಶಾಲೆಗಳಿಗೆ ಹಳೆಯ ಕಳೆ ಮರಳಿದೆ. ಶಾಲಾ ಆರಂಭೋತ್ಸವದ ನಿಮಿತ್ತ ಎರಡ್ಮೂರು ದಿನಗಳ ಹಿಂದಿನಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗಿತ್ತು.</p>.<p>ತರಗತಿ ಕೊಠಡಿಗಳು, ಶಾಚೌಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣಗಳನ್ನು ಕಟ್ಟಿ ಶಾಲೆಗಳನ್ನು ಅಂದ, ಚೆಂದ ಮಾಡಲಾಗಿತ್ತು. ಮೊದಲ ದಿನವಾಗಿದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚೇನೂ ಇರಲಿಲ್ಲ.</p>.<div><blockquote>ಬೀದರ್ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಇನ್ನಷ್ಟೇ ಜಿಲ್ಲೆಗೆ ಸಮವಸ್ತ್ರ ಬರಬೇಕಿದೆ.</blockquote><span class="attribution">– ಸಲೀಂ ಪಾಶಾ, ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ</span></div>.<p><strong>ಖಾಸಗಿ ಶಾಲೆಗಳಲ್ಲೂ ಸಂಭ್ರಮ</strong></p><p>ಬೀದರ್ ನಗರದ ಖಾಸಗಿ ಶಾಲೆಗಳಲ್ಲೂ ಶಾಲಾ ಆರಂಭೋತ್ಸವದ ಸಂಭ್ರಮ ಕಂಡು ಬಂತು. ನಗರದ ಸರಸ್ವತಿ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಮಕ್ಕಳ ಮೇಲೆ ಹೂಮಳೆಗೆರೆದು ಸ್ವಾಗತಿಸಲಾಯಿತು. ಶಾಲೆಯ ಅಧ್ಯಕ್ಷ ಸಜ್ಜನಶೆಟ್ಟಿ ಮತ್ತಿತರರು ಹಾಜರಿದ್ದರು. ಪ್ರತಾಪನಗರದ ಜನಸೇವಾ ಶಿಶು ಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳೂರಿನ ಜಾದೂಗಾರ ಕುದ್ರೋಳಿ ಗಣೇಶ ಜಾದೂ ಪ್ರದರ್ಶನದ ಮೂಲಕ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು.</p><p>‘ಮ್ಯಾಜಿಕ್ ಫಾರ್ ನಾಲೇಜ್' ಶೀರ್ಷಿಕೆಯಡಿ ಜಾದೂ ಪ್ರದರ್ಶಿಸಿದ ಅವರು ಮಕ್ಕಳನ್ನು ಜ್ಞಾನದ ಲೋಕಕ್ಕೆ ಕರೆದೊಯ್ದರು. ಏಕಾಗ್ರತೆ ಬುದ್ಧಿವಂತಿಕೆ ಜ್ಞಾನ ಹೆಚ್ಚಿಸಿಕೊಳ್ಳುವ ತಂತ್ರಗಳನ್ನು ಹೇಳಿಕೊಟ್ಟರು. ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ವಿದ್ಯಾಭಾರತಿ ಕರ್ನಾಟಕದ ಕಲಬುರಗಿ ವಿಭಾಗ ಪ್ರಮುಖ ಮಹಿಪಾಲ್ ರೆಡ್ಡಿ ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ಹಾಜರಿದ್ದರು.</p><p>ಕೆಪಿ ಶಾಲೆಯಲ್ಲೂ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಬುವಾಲಿ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಿಸಿದರು. ಕನ್ಯಕಾ ಪರಮೇಶ್ವರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ಪಾಟೀಲ ಯರನಳ್ಳಿ ಶಿಕ್ಷಕ ವೃಂದದವರು ಹಾಜರಿದ್ದರು.</p>.<p><strong>ಕೆಲವೆಡೆ ಆರಂಭ ಕೆಲವೆಡೆ ಇಂದು</strong></p><p>ಬೀದರ್ ಜಿಲ್ಲೆಯಾದ್ಯಂತ ಮೇ 29ರಂದು ಶಾಲಾ ಆರಂಭೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಬೀದರ್ ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕು ವ್ಯಾಪ್ತಿಯ ಶಾಲೆಗಳಲ್ಲಿ ಮಾತ್ರ ಕಾರ್ಯಕ್ರಮ ನಡೆಯಿತು. ಭಾಲ್ಕಿ ಔರಾದ್ ಕಮಲನಗರ ಹುಲಸೂರ ಹಾಗೂ ಬಸವಕಲ್ಯಾಣದಲ್ಲಿ ನಡೆಯಲಿಲ್ಲ. ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.</p><p>‘ಬೀದರ್ ಜಿಲ್ಲೆಯ ಕೆಲವೆಡೆ ಗುರುವಾರ (ಮೇ 29) ಶಾಲಾ ಆರಂಭೋತ್ಸವ ಮಾಡಲಾಗಿದೆ. ಕೆಲವೆಡೆ ಸ್ವಚ್ಛತಾ ಕೆಲಸ ಪೂರ್ಣಗೊಂಡಿದ್ದು ಶುಕ್ರವಾರ (ಮೇ 30) ನಡೆಯಲಿದೆ. ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಶಾಲೆಗಳಿಗೆ ತಳಿರು ತೋರಣದ ಅಲಂಕಾರ, ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ನಿಂತು ಮಕ್ಕಳ ಮೇಲೆ ಹೂಮಳೆ, ಗುಲಾಬಿ ಹೂ ಕೊಟ್ಟು ಶಾಲೆಗೆ ಸ್ವಾಗತ, ಮತ್ತೆ ಶಾಲೆಗೆ ಬಂದ ಖುಷಿ, ಸಹಪಾಠಿಗಳನ್ನು ಕಂಡು ಸಂಭ್ರಮಿಸಿದ ಚಿಣ್ಣರು.</p>.<p>ಶಾಲಾ ಆರಂಭೋತ್ಸವದ ಅಂಗವಾಗಿ ನಗರ ಸೇರಿದಂತೆ ಹಲವು ಸರ್ಕಾರಿ, ಅನುದಾನ ಸಹಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಗುರುವಾರ ಕಂಡು ಬಂದ ದೃಶ್ಯಗಳಿವು.</p>.<p>ಬೆಳಿಗ್ಗೆಯಿಂದ ಕಾರ್ಮೋಡ ಕವಿದ ವಾತಾವರಣ ಇತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ಚದುರಿದ ರೀತಿಯಲ್ಲಿ ಮಳೆ ಹನಿಗಳು ಉದುರುತ್ತಿದ್ದವು. ಅದರ ನಡುವೆ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲೆಯ ಎಲ್ಲ ಸಿಬ್ಬಂದಿ ಹೂಮಳೆಗರೆದು ಸ್ವಾಗತಿಸಿದರು. ಗುಲಾಬಿ ಹೂ ಕೊಟ್ಟು ‘ಸ್ವಾಗತ ಮಕ್ಕಳೇ’ ಎಂದು ಹರ್ಷೋದ್ಘಾರ ತೆಗೆದಾಗ ಚಿಣ್ಣರಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಚಾಕಲೇಟ್ ಹಾಗೂ ಬಿಸ್ಕತ್ ಕೊಟ್ಟಾಗ ಅವರ ಸಂಭ್ರಮ ಇಮ್ಮಡಿಸಿತು. ಅದರಲ್ಲೂ ಕಳೆದೆರಡು ತಿಂಗಳ ನಂತರ ಸಹಪಾಠಿಗಳನ್ನು ಮೊದಲ ಬಾರಿ ಭೇಟಿ ಮಾಡಿದ ಪುಳಕ.</p>.<p>ಬಳಿಕ ಅವರಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಹೊಸ ಪುಸ್ತಕಗಳು ಕೈಸೇರಿದ ನಂತರ ಎಲ್ಲರ ಮುಖಗಳು ಮತ್ತಷ್ಟು ಅರಳಿದವು. ಮೊದಲ ದಿನ ತರಗತಿಗಳು ಇರದ ಕಾರಣ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಕಾಲ ಕಳೆದರು.</p>.<p>ರಜೆಯ ಅಂಗವಾಗಿ ಕಳೆದ ಎರಡು ತಿಂಗಳಿಂದ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದರು. ಚಿಣ್ಣರ ಆಗಮನದೊಂದಿಗೆ ಶಾಲೆಗಳಿಗೆ ಹಳೆಯ ಕಳೆ ಮರಳಿದೆ. ಶಾಲಾ ಆರಂಭೋತ್ಸವದ ನಿಮಿತ್ತ ಎರಡ್ಮೂರು ದಿನಗಳ ಹಿಂದಿನಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗಿತ್ತು.</p>.<p>ತರಗತಿ ಕೊಠಡಿಗಳು, ಶಾಚೌಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣಗಳನ್ನು ಕಟ್ಟಿ ಶಾಲೆಗಳನ್ನು ಅಂದ, ಚೆಂದ ಮಾಡಲಾಗಿತ್ತು. ಮೊದಲ ದಿನವಾಗಿದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚೇನೂ ಇರಲಿಲ್ಲ.</p>.<div><blockquote>ಬೀದರ್ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಇನ್ನಷ್ಟೇ ಜಿಲ್ಲೆಗೆ ಸಮವಸ್ತ್ರ ಬರಬೇಕಿದೆ.</blockquote><span class="attribution">– ಸಲೀಂ ಪಾಶಾ, ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ</span></div>.<p><strong>ಖಾಸಗಿ ಶಾಲೆಗಳಲ್ಲೂ ಸಂಭ್ರಮ</strong></p><p>ಬೀದರ್ ನಗರದ ಖಾಸಗಿ ಶಾಲೆಗಳಲ್ಲೂ ಶಾಲಾ ಆರಂಭೋತ್ಸವದ ಸಂಭ್ರಮ ಕಂಡು ಬಂತು. ನಗರದ ಸರಸ್ವತಿ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಮಕ್ಕಳ ಮೇಲೆ ಹೂಮಳೆಗೆರೆದು ಸ್ವಾಗತಿಸಲಾಯಿತು. ಶಾಲೆಯ ಅಧ್ಯಕ್ಷ ಸಜ್ಜನಶೆಟ್ಟಿ ಮತ್ತಿತರರು ಹಾಜರಿದ್ದರು. ಪ್ರತಾಪನಗರದ ಜನಸೇವಾ ಶಿಶು ಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳೂರಿನ ಜಾದೂಗಾರ ಕುದ್ರೋಳಿ ಗಣೇಶ ಜಾದೂ ಪ್ರದರ್ಶನದ ಮೂಲಕ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು.</p><p>‘ಮ್ಯಾಜಿಕ್ ಫಾರ್ ನಾಲೇಜ್' ಶೀರ್ಷಿಕೆಯಡಿ ಜಾದೂ ಪ್ರದರ್ಶಿಸಿದ ಅವರು ಮಕ್ಕಳನ್ನು ಜ್ಞಾನದ ಲೋಕಕ್ಕೆ ಕರೆದೊಯ್ದರು. ಏಕಾಗ್ರತೆ ಬುದ್ಧಿವಂತಿಕೆ ಜ್ಞಾನ ಹೆಚ್ಚಿಸಿಕೊಳ್ಳುವ ತಂತ್ರಗಳನ್ನು ಹೇಳಿಕೊಟ್ಟರು. ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ವಿದ್ಯಾಭಾರತಿ ಕರ್ನಾಟಕದ ಕಲಬುರಗಿ ವಿಭಾಗ ಪ್ರಮುಖ ಮಹಿಪಾಲ್ ರೆಡ್ಡಿ ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ಹಾಜರಿದ್ದರು.</p><p>ಕೆಪಿ ಶಾಲೆಯಲ್ಲೂ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಬುವಾಲಿ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಿಸಿದರು. ಕನ್ಯಕಾ ಪರಮೇಶ್ವರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ಪಾಟೀಲ ಯರನಳ್ಳಿ ಶಿಕ್ಷಕ ವೃಂದದವರು ಹಾಜರಿದ್ದರು.</p>.<p><strong>ಕೆಲವೆಡೆ ಆರಂಭ ಕೆಲವೆಡೆ ಇಂದು</strong></p><p>ಬೀದರ್ ಜಿಲ್ಲೆಯಾದ್ಯಂತ ಮೇ 29ರಂದು ಶಾಲಾ ಆರಂಭೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಬೀದರ್ ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕು ವ್ಯಾಪ್ತಿಯ ಶಾಲೆಗಳಲ್ಲಿ ಮಾತ್ರ ಕಾರ್ಯಕ್ರಮ ನಡೆಯಿತು. ಭಾಲ್ಕಿ ಔರಾದ್ ಕಮಲನಗರ ಹುಲಸೂರ ಹಾಗೂ ಬಸವಕಲ್ಯಾಣದಲ್ಲಿ ನಡೆಯಲಿಲ್ಲ. ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.</p><p>‘ಬೀದರ್ ಜಿಲ್ಲೆಯ ಕೆಲವೆಡೆ ಗುರುವಾರ (ಮೇ 29) ಶಾಲಾ ಆರಂಭೋತ್ಸವ ಮಾಡಲಾಗಿದೆ. ಕೆಲವೆಡೆ ಸ್ವಚ್ಛತಾ ಕೆಲಸ ಪೂರ್ಣಗೊಂಡಿದ್ದು ಶುಕ್ರವಾರ (ಮೇ 30) ನಡೆಯಲಿದೆ. ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>