ಭಾಲ್ಕಿ (ಬೀದರ್ ಜಿಲ್ಲೆ):ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಆದೇಶ ಹಿಂಪಡೆಯಲು ಕೋರಿ ಕಲ್ಯಾಣ ಕರ್ನಾಟಕದ 50ಕ್ಕೂ ಹೆಚ್ಚು ಮಠಾಧೀಶರ ಸಹಿಯುಳ್ಳ ಮನವಿಪತ್ರವನ್ನು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಇಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.
‘ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಸರ್ಕಾರದ ಚಿಂತನೆ ಒಳ್ಳೆಯ ಬೆಳವಣಿಗೆ. ಆದರೆ, ಬಿಸಿಯೂಟ ಆಹಾರದ ಜತೆಗೆ ಮೊಟ್ಟೆ ಕೊಡುತ್ತಿರುವುದು ಸರಿಯಲ್ಲ. ಶಾಲೆ ಎಲ್ಲ ವರ್ಗದ ಮಕ್ಕಳಿಗೂ ವಿದ್ಯೆ ಕೊಡುವ ಸ್ಥಳ. ಹೀಗಾಗಿ ಎಲ್ಲ ಮಕ್ಕಳಿಗೆ ಸರಿ ಹೊಂದುವ ಸತ್ವಯುಕ್ತ ಸಸ್ಯಾಹಾರ ಕೊಡಬೇಕು’ ಎಂದೂ ಒತ್ತಾಯಿಸಿದರು.
‘ಸಂಪ್ರದಾಯಸ್ಥ ಕುಟುಂಬದ ಮಕ್ಕಳು ಸಹಜವಾಗಿಯೇ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಮೊಟ್ಟೆ ತಿನ್ನ ಬಹುದು. ಇದರಿಂದ ಧಾರ್ಮಿಕ ನಂಬಿಕೆ ಗಳಿಗೆ ಧಕ್ಕೆ ಉಂಟಾಗುತ್ತದೆ. ಸರ್ಕಾರ ರಾಜಧರ್ಮ ಪಾಲಿಸಬೇಕು’ ಎಂದರು.