ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ನೌಕರ ಸಾವು

Last Updated 19 ಅಕ್ಟೋಬರ್ 2021, 6:18 IST
ಅಕ್ಷರ ಗಾತ್ರ

ಮುಸ್ತಾಪೂರ (ಹುಲಸೂರ): ತಾಲ್ಲೂಕಿನ ಮುಸ್ತಾಪೂರ ಹತ್ತಿರದ ಅಣೆಕಟ್ಟೆಯ ನೀರು ಸರಬರಾಜು ನೌಕರನಾಗಿದ್ದ ವಿಲಾಸ ರಾಮ ಜಾಧವ (38) ಎಂಬುವರು ಸೋಮವಾರ ಅಣೆಕಟ್ಟಿನ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋಗಿ ಮೃತಪಟ್ಟಿದ್ದಾರೆ.

ಘಾಟಬೊರಳ ತಾಂಡಾ ನಿವಾಸಿಯಾಗಿದ್ದ ಅವರು ಬಸವಕಲ್ಯಾಣ ನಗರ ಸಭೆಯಲ್ಲಿ ಅರೆಗುತ್ತಿಗೆ ನೌಕರರಾಗಿ ನೇಮಕಗೊಂಡಿದ್ದರು.

ಶಾಸಕ ಶರಣು ಸಲಗರ, ಅಗ್ನಿಶಾಮಕ ದಳದ ವರಿಷ್ಠ ಅಧಿಕಾರಿ ಪ್ರವೀಣ ಕುಮಾರ, ಬಸವಕಲ್ಯಾಣ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ಕಿರಣಕುಮಾರ ಧೊತರೆ, ಹುಲಸೂರ ತಹಶೀಲ್ದಾರ್‌ ಶಿವಾನಂದ ಮೇತ್ರೆ, ಬಸವಕಲ್ಯಾಣ ತಹಶೀಲ್ದಾರ್‌ ಸಾವಿತ್ರಿ ಸಲಗರ, ಮುಚಳಂಬ ಪಿಡಿಒ ಓಂಕಾರ ಬಿರಾದಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಶವ ಪತ್ತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT