<p><strong>ಬೀದರ್:</strong> ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರ ಅಭಿನಂದನ ಸಮಾರಂಭ ನಗರದ ಮನ್ನಳ್ಳಿ ರಸ್ತೆಯ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಭಾನುವಾರ ರಾತ್ರಿ ಜರುಗಿತು.</p>.<p>ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಬೀದರ್ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಖಂಡ್ರೆ ಅವರನ್ನು ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು, ಲಿಂಗಾಯತ ಸಮಾಜದ ಮುಖಂಡರು ಸನ್ಮಾನಿಸಿದರು. ಬಳಿಕ ಖಂಡ್ರೆ ಅವರಿಗೆ ಶುಭ ಕೋರಿದರು. ವೀರಶೈವ ಲಿಂಗಾಯತ ಸಮಾಜವನ್ನು ಒಟ್ಟಿಗೆ ಕರೆದೊಯ್ಯುವುದರ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಈಶ್ವರ ಖಂಡ್ರೆ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದ ವೇದಿಕೆಯು ಲಿಂಗಾಯತ ಸಮಾಜದ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು.</p>.<p>ಕಾರ್ಯಕ್ರಮಕ್ಕೂ ಮುನ್ನ ಸಂಜೆ ನಗರದ ಬಸವೇಶ್ವರ ವೃತ್ತದಲ್ಲಿ ಈಶ್ವರ ಖಂಡ್ರೆ ಅವರನ್ನು ಬರಮಾಡಿಕೊಳ್ಳಲಾಯಿತು. ಹಿಟಾಚಿ ಮೂಲಕ ಖಂಡ್ರೆ ಅವರಿಗೆ ಬೃಹತ್ ಹೂಮಾಲೆ ಹಾಕಲಾಯಿತು. ಪಟಾಕಿ ಸಿಡಿಸಿ ಜಯಘೋಷ ಹಾಕಲಾಯಿತು. ಆನಂತರ ತೆರೆದ ವಾಹನದಲ್ಲಿ ವೇದಿಕೆ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಕಲಾ ತಂಡಗಳು, ಲಿಂಗಾಯತ ಸಮಾಜದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.</p>.<p>ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ದರಾಮ ಶರಣರು, ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಲಿಂಗಾಯತ ಮಹಾಮಠದ ಬಸವಪ್ರಭು ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬೀದರ್ ಮಹಾನಗರ ಪಾಲಿಕೆ ಉಪಮೇಯರ್ ಲಕ್ಷ್ಮೀಬಾಯಿ ಹಂಗರಗಿ, ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್, ಮುಖಂಡರಾದ ಬಸವರಾಜ ದೇಶಮುಖ, ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಧನ್ನೂರ, ದತ್ತು ಮೂಲಗೆ, ಆನಂದ್ ದೇವಪ್ಪ, ಜೈರಾಜ್ ಖಂಡ್ರೆ, ಧನರಾಜ ತಾಳಂಪಳ್ಳಿ, ಶಕುಂತಲಾ ಬೆಲ್ದಾಳೆ, ಗುರುನಾಥ ಕೊಳ್ಳೂರ, ದಿಲೀಪ್ ತಾಳಂಪಳ್ಳಿ, ಶಿವಶರಣಪ್ಪ ವಾಲಿ, ಗುರಮ್ಮ ಸಿದ್ದಾರೆಡ್ಡಿ, ಬಿ.ಜಿ.ಶೆಟಕಾರ್, ಡಾ. ಚಂದ್ರಕಾಂತ ಗುದಗೆ, ಬಸವರಾಜ ಭತಮುರ್ಗೆ, ರಾಜಶ್ರೀ ಸ್ವಾಮಿ, ಶರಣಪ್ಪ ಮಿಠಾರೆ, ವೈಜಿನಾಥ ಕಮಠಾಣೆ, ಡಾ. ರಜನೀಶ್ ವಾಲಿ, ಜಗನ್ನಾಥ ಹೆಬ್ಬಾಳೆ ಮತ್ತಿತರರು ಹಾಜರಿದ್ದರು. ದೀಪಕ್ ಥಮಕೆ ನಿರೂಪಿಸಿದರು. ಬಾಬುವಾಲಿ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಮಹಾಸಭೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.</p>.<p><strong>- ‘ಸಮಾಜ ಬಂದಾಗ ಸರ್ಕಾರದ ವಿರುದ್ಧ ಹೋಗಬೇಕು’</strong> </p><p>‘ಸಮಾಜದ ಪ್ರಶ್ನೆ ಬಂದಾಗ ಸರ್ಕಾರದ ವಿರುದ್ಧ ಹೋಗಬೇಕಾಗುತ್ತದೆ. ಇತರೆ ಸಮಾಜಗಳಿಗೆ ಹೋಲಿಸಿದರೆ ಲಿಂಗಾಯತ ಸಮಾಜ ಬಹಳ ಹಿಂದೆ ಇದೆ’ ಎಂದು ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಹೇಳಿದರು. ಹಿಂದೆ ಭೀಮಣ್ಣ ಖಂಡ್ರೆ ಶಾಮನೂರು ಶಿವಶಂಕರಪ್ಪ ಅವರು ವಯಸ್ಸಾದ ಬಳಿಕ ಲಿಂಗಾಯತ ಮಹಾಸಭೆ ಅಧ್ಯಕ್ಷರಾಗಿದ್ದರು. ಈಶ್ವರ ಖಂಡ್ರೆಯವರಿಗೆ ಚಿಕ್ಕ ವಯಸ್ಸಿನಲ್ಲಿ ಅಧ್ಯಕ್ಷ ಸ್ಥಾನ ಒಲಿದಿದೆ. ಬೀದರ್ ನಿಂದ ಚಾಮರಾಜನಗರದ ವರೆಗೆ ಸಮಾಜದ ಸಂಘಟನೆ ಆಗಬೇಕು. ಈಶ್ವರ ಮೇಲೆ ಬಹಳ ನಿರೀಕ್ಷೆ ಇದೆ ಎಂದರು. </p>.<p><strong>‘ತತ್ವ ಸಿದ್ಧಾಂತದ ಮೇಲೆ ಸಮಾಜ ಕಟ್ಟಲಿ’</strong> </p><p>‘ತತ್ವ ಸಿದ್ಧಾಂತಗಳ ಮೇಲೆ ಸಮಾಜ ಕಟ್ಟಬೇಕು. ಆ ಕೆಲಸ ಈಶ್ವರ ಬಿ. ಖಂಡ್ರೆ ಮಾಡಬೇಕು. ಅಷ್ಟಾವರಣ ಪಂಚಾಚಾರ ಷಟಸ್ಥಲ ತತ್ವಗಳ ಆಧಾರದ ಮೇಲೆ ಸಮಾಜ ಕಟ್ಟುವ ಕೆಲಸ ಮಾಡಬೇಕು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಸಲಹೆ ಮಾಡಿದರು. ಮುಸ್ಲಿಮರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಧರ್ಮದ ವಿಷಯ ಬಂದಾಗ ಒಂದಾಗುತ್ತಾರೆ. ಆದರೆ ಲಿಂಗಾಯತರು ಹಾಗಲ್ಲ ಧರ್ಮ ಬಿಟ್ಟು ಪಕ್ಷ ನೋಡುತ್ತಾರೆ. ಇದು ಬದಲಾಗಬೇಕು. ಕರ್ನಾಟಕಕ್ಕೆ ಲಿಂಗಾಯತ ಮಠಗಳ ಕೊಡುಗೆ ಬಹಳ ದೊಡ್ಡದಿದೆ. ಸರ್ವ ಜನಾಂಗದವರಿಗೆ ಅನ್ನ ಜ್ಞಾನ ಕೊಟ್ಟವರು ಲಿಂಗಾಯತರು. ಇದನ್ನು ಇಡೀ ದೇಶಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು. </p>.<p><strong>ಎಲ್ಲ ಜಿಲ್ಲೆಗಳಲ್ಲಿ ವಸತಿ ನಿಲಯ’</strong></p><p> ‘ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅದೇ ರೀತಿ ಸಮಾಜದ ಯುವಕ/ಯುವತಿಯರಿಗೆ ಐಎಎಸ್/ಕೆಎಎಸ್ ತರಬೇತಿ ಕೊಡಿಸುವ ಉದ್ದೇಶವಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ. ಖಂಡ್ರೆ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಗುರು–ವಿರಕ್ತರು ಒಂದಾಗಬೇಕು. ಸಮಾಜದಲ್ಲಿ ಅಖಂಡತೆ ತರುವ ಅಗತ್ಯವಿದೆ ಎಂದರು.</p>.<p> <strong>ಸಮಾಜ ಎಂದೂ ಒಡೆದಿಲ್ಲ...</strong></p><p>. ಭಕ್ತರು ಮಠಗಳಿಗೆ ಹೋಗುವುದು ಬಿಟ್ಟಿಲ್ಲ. ಹೃದಯವಂತಿಕೆ ಮೇಲೆ ಸ್ವಾಮೀಜಿಗಳು ಸೇರಬೇಕು. ಸಮಾಜಕ್ಕೆ ದಿಕ್ಕು ಬೇಕು. ಅದಕ್ಕೆ ಮಹಾಸಭೆ ದಾರಿ ತೋರಿಸಬೇಕು. -ತಡೋಳಾ ರಾಜೇಶ್ವರ ಶಿವಾಚಾರ್ಯರು ಈಶ್ವರ ಖಂಡ್ರೆ ಧರ್ಮ ಸಮನ್ವಯದ ರಾಜಕಾರಣಿಯಾಗಿ ಧರ್ಮದ ಕೆಲಸ ಮಾಡುತ್ತಿದ್ದಾರೆ. ಮಹಾಸಭೆ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ವೀರಶೈವ ಲಿಂಗಾಯತರಲ್ಲಿ ವಿಚಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ. –ಹಾರಕೂಡ ಚನ್ನವೀರ ಶಿವಾಚಾರ್ಯರು ಈಶ್ವರ ಬಿ.ಖಂಡ್ರೆ ಅವರ ನೇತೃತ್ವದಲ್ಲಿ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಅವರಿಗೆ ಸಮಾಜದ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲುವ ಕೆಲಸ ಮಾಡಬೇಕು. – ಗಂಗಾಂಬಿಕಾ ಅಕ್ಕ ಅಧ್ಯಕ್ಷೆ ಬಸವ ಸೇವಾ ಪ್ರತಿಷ್ಠಾನ ಈಶ್ವರ ಖಂಡ್ರೆ ಅವರಿಗೆ ಬಸವಾದಿ ಶರಣರ ಬಗ್ಗೆ ಅಪಾರ ಗೌರವ ಇದೆ. ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. </p><p>ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲೋಣ. –ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಈಶ್ವರ ಬಿ.ಖಂಡ್ರೆ ಪ್ರಗತಿಪರ ಅಭಿವೃದ್ಧಿ ಪರ ಚಿಂತನೆ ಹೊಂದಿದವರು. ಲಿಂಗಾಯತ ಧರ್ಮದ ಏಳಿಗೆಗೆ ಶ್ರಮಿಸುವ ಭರವಸೆ ಇದೆ. -ಸೂರ್ಯಕಾಂತ್ ನಾಗಮಾರಪಳ್ಳಿ ಎನ್ಎಸ್ಎಸ್ಕೆ ಅಧ್ಯಕ್ಷ ಸಮಾಜ ಒಂದಾಗುವ ಅಗತ್ಯವಿದೆ. ಇದು ಸಮಾಜದ ಜನರ ಬೇಡಿಕೆಯಾಗಿದೆ. ವೀರಶೈವ ಲಿಂಗಾಯತ ಬೇರೆ ಬೇರೆ ಎಂಬ ಭಾವನೆ ಬಿಡೋಣ. ಸಮಾಜದ ಶೋಷಿತ ಹಿಂದುಳಿದವರಿಗೆ ಬೆನ್ನೆಲುಬಾಗಿ ನಿಲ್ಲೋಣ. –ಬಸವರಾಜ ಜಾಬಶೆಟ್ಟಿ ಸ್ವಾಗತ ಸಮಿತಿ ಅಧ್ಯಕ್ಷ ಲಿಂಗಾಯತ ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸಲು ಬೆಂಗಳೂರಿನಲ್ಲಿ ಎರಡು ಎಕರೆ ಜಮೀನು ಕೊಡುವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್ ನಿರ್ಮಿಸಬೇಕು. –ಅಶೋಕ್ ಖೇಣಿ ಮಾಜಿಶಾಸಕ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರ ಅಭಿನಂದನ ಸಮಾರಂಭ ನಗರದ ಮನ್ನಳ್ಳಿ ರಸ್ತೆಯ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಭಾನುವಾರ ರಾತ್ರಿ ಜರುಗಿತು.</p>.<p>ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಬೀದರ್ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಖಂಡ್ರೆ ಅವರನ್ನು ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು, ಲಿಂಗಾಯತ ಸಮಾಜದ ಮುಖಂಡರು ಸನ್ಮಾನಿಸಿದರು. ಬಳಿಕ ಖಂಡ್ರೆ ಅವರಿಗೆ ಶುಭ ಕೋರಿದರು. ವೀರಶೈವ ಲಿಂಗಾಯತ ಸಮಾಜವನ್ನು ಒಟ್ಟಿಗೆ ಕರೆದೊಯ್ಯುವುದರ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಈಶ್ವರ ಖಂಡ್ರೆ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದ ವೇದಿಕೆಯು ಲಿಂಗಾಯತ ಸಮಾಜದ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು.</p>.<p>ಕಾರ್ಯಕ್ರಮಕ್ಕೂ ಮುನ್ನ ಸಂಜೆ ನಗರದ ಬಸವೇಶ್ವರ ವೃತ್ತದಲ್ಲಿ ಈಶ್ವರ ಖಂಡ್ರೆ ಅವರನ್ನು ಬರಮಾಡಿಕೊಳ್ಳಲಾಯಿತು. ಹಿಟಾಚಿ ಮೂಲಕ ಖಂಡ್ರೆ ಅವರಿಗೆ ಬೃಹತ್ ಹೂಮಾಲೆ ಹಾಕಲಾಯಿತು. ಪಟಾಕಿ ಸಿಡಿಸಿ ಜಯಘೋಷ ಹಾಕಲಾಯಿತು. ಆನಂತರ ತೆರೆದ ವಾಹನದಲ್ಲಿ ವೇದಿಕೆ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಕಲಾ ತಂಡಗಳು, ಲಿಂಗಾಯತ ಸಮಾಜದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.</p>.<p>ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ದರಾಮ ಶರಣರು, ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಲಿಂಗಾಯತ ಮಹಾಮಠದ ಬಸವಪ್ರಭು ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬೀದರ್ ಮಹಾನಗರ ಪಾಲಿಕೆ ಉಪಮೇಯರ್ ಲಕ್ಷ್ಮೀಬಾಯಿ ಹಂಗರಗಿ, ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್, ಮುಖಂಡರಾದ ಬಸವರಾಜ ದೇಶಮುಖ, ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಧನ್ನೂರ, ದತ್ತು ಮೂಲಗೆ, ಆನಂದ್ ದೇವಪ್ಪ, ಜೈರಾಜ್ ಖಂಡ್ರೆ, ಧನರಾಜ ತಾಳಂಪಳ್ಳಿ, ಶಕುಂತಲಾ ಬೆಲ್ದಾಳೆ, ಗುರುನಾಥ ಕೊಳ್ಳೂರ, ದಿಲೀಪ್ ತಾಳಂಪಳ್ಳಿ, ಶಿವಶರಣಪ್ಪ ವಾಲಿ, ಗುರಮ್ಮ ಸಿದ್ದಾರೆಡ್ಡಿ, ಬಿ.ಜಿ.ಶೆಟಕಾರ್, ಡಾ. ಚಂದ್ರಕಾಂತ ಗುದಗೆ, ಬಸವರಾಜ ಭತಮುರ್ಗೆ, ರಾಜಶ್ರೀ ಸ್ವಾಮಿ, ಶರಣಪ್ಪ ಮಿಠಾರೆ, ವೈಜಿನಾಥ ಕಮಠಾಣೆ, ಡಾ. ರಜನೀಶ್ ವಾಲಿ, ಜಗನ್ನಾಥ ಹೆಬ್ಬಾಳೆ ಮತ್ತಿತರರು ಹಾಜರಿದ್ದರು. ದೀಪಕ್ ಥಮಕೆ ನಿರೂಪಿಸಿದರು. ಬಾಬುವಾಲಿ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಮಹಾಸಭೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.</p>.<p><strong>- ‘ಸಮಾಜ ಬಂದಾಗ ಸರ್ಕಾರದ ವಿರುದ್ಧ ಹೋಗಬೇಕು’</strong> </p><p>‘ಸಮಾಜದ ಪ್ರಶ್ನೆ ಬಂದಾಗ ಸರ್ಕಾರದ ವಿರುದ್ಧ ಹೋಗಬೇಕಾಗುತ್ತದೆ. ಇತರೆ ಸಮಾಜಗಳಿಗೆ ಹೋಲಿಸಿದರೆ ಲಿಂಗಾಯತ ಸಮಾಜ ಬಹಳ ಹಿಂದೆ ಇದೆ’ ಎಂದು ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಹೇಳಿದರು. ಹಿಂದೆ ಭೀಮಣ್ಣ ಖಂಡ್ರೆ ಶಾಮನೂರು ಶಿವಶಂಕರಪ್ಪ ಅವರು ವಯಸ್ಸಾದ ಬಳಿಕ ಲಿಂಗಾಯತ ಮಹಾಸಭೆ ಅಧ್ಯಕ್ಷರಾಗಿದ್ದರು. ಈಶ್ವರ ಖಂಡ್ರೆಯವರಿಗೆ ಚಿಕ್ಕ ವಯಸ್ಸಿನಲ್ಲಿ ಅಧ್ಯಕ್ಷ ಸ್ಥಾನ ಒಲಿದಿದೆ. ಬೀದರ್ ನಿಂದ ಚಾಮರಾಜನಗರದ ವರೆಗೆ ಸಮಾಜದ ಸಂಘಟನೆ ಆಗಬೇಕು. ಈಶ್ವರ ಮೇಲೆ ಬಹಳ ನಿರೀಕ್ಷೆ ಇದೆ ಎಂದರು. </p>.<p><strong>‘ತತ್ವ ಸಿದ್ಧಾಂತದ ಮೇಲೆ ಸಮಾಜ ಕಟ್ಟಲಿ’</strong> </p><p>‘ತತ್ವ ಸಿದ್ಧಾಂತಗಳ ಮೇಲೆ ಸಮಾಜ ಕಟ್ಟಬೇಕು. ಆ ಕೆಲಸ ಈಶ್ವರ ಬಿ. ಖಂಡ್ರೆ ಮಾಡಬೇಕು. ಅಷ್ಟಾವರಣ ಪಂಚಾಚಾರ ಷಟಸ್ಥಲ ತತ್ವಗಳ ಆಧಾರದ ಮೇಲೆ ಸಮಾಜ ಕಟ್ಟುವ ಕೆಲಸ ಮಾಡಬೇಕು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಸಲಹೆ ಮಾಡಿದರು. ಮುಸ್ಲಿಮರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಧರ್ಮದ ವಿಷಯ ಬಂದಾಗ ಒಂದಾಗುತ್ತಾರೆ. ಆದರೆ ಲಿಂಗಾಯತರು ಹಾಗಲ್ಲ ಧರ್ಮ ಬಿಟ್ಟು ಪಕ್ಷ ನೋಡುತ್ತಾರೆ. ಇದು ಬದಲಾಗಬೇಕು. ಕರ್ನಾಟಕಕ್ಕೆ ಲಿಂಗಾಯತ ಮಠಗಳ ಕೊಡುಗೆ ಬಹಳ ದೊಡ್ಡದಿದೆ. ಸರ್ವ ಜನಾಂಗದವರಿಗೆ ಅನ್ನ ಜ್ಞಾನ ಕೊಟ್ಟವರು ಲಿಂಗಾಯತರು. ಇದನ್ನು ಇಡೀ ದೇಶಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು. </p>.<p><strong>ಎಲ್ಲ ಜಿಲ್ಲೆಗಳಲ್ಲಿ ವಸತಿ ನಿಲಯ’</strong></p><p> ‘ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅದೇ ರೀತಿ ಸಮಾಜದ ಯುವಕ/ಯುವತಿಯರಿಗೆ ಐಎಎಸ್/ಕೆಎಎಸ್ ತರಬೇತಿ ಕೊಡಿಸುವ ಉದ್ದೇಶವಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ. ಖಂಡ್ರೆ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಗುರು–ವಿರಕ್ತರು ಒಂದಾಗಬೇಕು. ಸಮಾಜದಲ್ಲಿ ಅಖಂಡತೆ ತರುವ ಅಗತ್ಯವಿದೆ ಎಂದರು.</p>.<p> <strong>ಸಮಾಜ ಎಂದೂ ಒಡೆದಿಲ್ಲ...</strong></p><p>. ಭಕ್ತರು ಮಠಗಳಿಗೆ ಹೋಗುವುದು ಬಿಟ್ಟಿಲ್ಲ. ಹೃದಯವಂತಿಕೆ ಮೇಲೆ ಸ್ವಾಮೀಜಿಗಳು ಸೇರಬೇಕು. ಸಮಾಜಕ್ಕೆ ದಿಕ್ಕು ಬೇಕು. ಅದಕ್ಕೆ ಮಹಾಸಭೆ ದಾರಿ ತೋರಿಸಬೇಕು. -ತಡೋಳಾ ರಾಜೇಶ್ವರ ಶಿವಾಚಾರ್ಯರು ಈಶ್ವರ ಖಂಡ್ರೆ ಧರ್ಮ ಸಮನ್ವಯದ ರಾಜಕಾರಣಿಯಾಗಿ ಧರ್ಮದ ಕೆಲಸ ಮಾಡುತ್ತಿದ್ದಾರೆ. ಮಹಾಸಭೆ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ವೀರಶೈವ ಲಿಂಗಾಯತರಲ್ಲಿ ವಿಚಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ. –ಹಾರಕೂಡ ಚನ್ನವೀರ ಶಿವಾಚಾರ್ಯರು ಈಶ್ವರ ಬಿ.ಖಂಡ್ರೆ ಅವರ ನೇತೃತ್ವದಲ್ಲಿ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಅವರಿಗೆ ಸಮಾಜದ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲುವ ಕೆಲಸ ಮಾಡಬೇಕು. – ಗಂಗಾಂಬಿಕಾ ಅಕ್ಕ ಅಧ್ಯಕ್ಷೆ ಬಸವ ಸೇವಾ ಪ್ರತಿಷ್ಠಾನ ಈಶ್ವರ ಖಂಡ್ರೆ ಅವರಿಗೆ ಬಸವಾದಿ ಶರಣರ ಬಗ್ಗೆ ಅಪಾರ ಗೌರವ ಇದೆ. ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. </p><p>ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲೋಣ. –ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಈಶ್ವರ ಬಿ.ಖಂಡ್ರೆ ಪ್ರಗತಿಪರ ಅಭಿವೃದ್ಧಿ ಪರ ಚಿಂತನೆ ಹೊಂದಿದವರು. ಲಿಂಗಾಯತ ಧರ್ಮದ ಏಳಿಗೆಗೆ ಶ್ರಮಿಸುವ ಭರವಸೆ ಇದೆ. -ಸೂರ್ಯಕಾಂತ್ ನಾಗಮಾರಪಳ್ಳಿ ಎನ್ಎಸ್ಎಸ್ಕೆ ಅಧ್ಯಕ್ಷ ಸಮಾಜ ಒಂದಾಗುವ ಅಗತ್ಯವಿದೆ. ಇದು ಸಮಾಜದ ಜನರ ಬೇಡಿಕೆಯಾಗಿದೆ. ವೀರಶೈವ ಲಿಂಗಾಯತ ಬೇರೆ ಬೇರೆ ಎಂಬ ಭಾವನೆ ಬಿಡೋಣ. ಸಮಾಜದ ಶೋಷಿತ ಹಿಂದುಳಿದವರಿಗೆ ಬೆನ್ನೆಲುಬಾಗಿ ನಿಲ್ಲೋಣ. –ಬಸವರಾಜ ಜಾಬಶೆಟ್ಟಿ ಸ್ವಾಗತ ಸಮಿತಿ ಅಧ್ಯಕ್ಷ ಲಿಂಗಾಯತ ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸಲು ಬೆಂಗಳೂರಿನಲ್ಲಿ ಎರಡು ಎಕರೆ ಜಮೀನು ಕೊಡುವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್ ನಿರ್ಮಿಸಬೇಕು. –ಅಶೋಕ್ ಖೇಣಿ ಮಾಜಿಶಾಸಕ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>