ಪಂಚಪೀಠಗಳು-ವಿರಕ್ತ ಪೀಠಗಳು ಮತ್ತು ಅಸಂಖ್ಯಾತ ಗುರು-ವಿರಕ್ತ ಮಠಮಾನ್ಯಗಳು, ಸಂತ ಶರಣರು, ಅನುಭಾವಿಗಳು ದೇಶದ ಸಂಸ್ಕೃತಿ, ಪರಂಪರೆ, ಏಕತೆ, ಸೋದರತ್ವಕ್ಕೆ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆ, ಜ್ಞಾನ, ದಾಸೋಹ ಮತ್ತು ಜನ-ಜೀವನದ ಸರ್ವಾಂಗಿಣ ವಿಕಾಸಕ್ಕೆ ನೀಡಿದ ಕೊಡುಗೆಗಳು ಅಪಾರ ಮತ್ತು ಅಗಣಿತವಾಗಿವೆ. ಈ ಉದಾತ್ತ ಮೌಲಿಕವಾದ ಜೀವನ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಬೇಕಾಗಿರುವುದು ವರ್ತಮಾನದ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.