ಆರೋಪಿಯು ಖೋಟಾ ನೋಟುಗಳನ್ನು ಮಂಠಾಳದ ನಿವಾಸಿ ತಸ್ಲೀಮ್ ಅಜಿಮೊದ್ದೀನ್ ಪಿಂಜಾರ್ ಎನ್ನುವವನಿಗೆ ಚಲಾವಣೆಗಾಗಿ ನೀಡಿದ್ದರು. ಆದ್ದರಿಂದ ತಸ್ಲೀಮ್ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿಯಲ್ಲಿ ನೋಟುಗಳನ್ನು ಬೇರೆಯವರಿಗೆ ನೀಡುತ್ತಿದ್ದರು. ಆಗ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಸಂಶಯ ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.