‘ಕಾಡುಹಂದಿಗಳಿಂದ ಜೋಳ ರಕ್ಷಿಸಲು ಜಮೀನಿನಲ್ಲಿ ಗುಡಿಸಲು ನಿರ್ಮಿಸಿದ್ದರು. ರಾತ್ರಿ ಇಬ್ಬರು ಅಡುಗೆ ಮಾಡಿದ್ದು, ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ಒಲೆಯಲ್ಲಿದ್ದ ಬೆಂಕಿ ಕಿಡಿ ರಾತ್ರಿ ಗುಡಿಸಲಿಗೆ ತಗುಲಿದೆ. ಮಾರುತಿ ಕುರಣೆ ಎಚ್ಚರಗೊಂಡಿದ್ದು, ಜಗನ್ನಾಥ ಅವರಿಗೆ ಎಚ್ಚರಗೊಳಿಸಲು ಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.