ಈಗಾಗಲೇ ಕೆಆರ್ಐಡಿಎಲ್ ವತಿಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡದ ಉದ್ಘಾಟನೆ ಮಾಡದೇ ಹಾಗೆಯೇ ಬೀಡಲಾಗಿದೆ. ಬಾಗಿಲು ಹಾಗೂ ಕಿಟಕಿ ಹಾಳಾಗಲಾರಂಭಿಸಿವೆ.‘ಕಟ್ಟಡದ ಸುತ್ತಲೂ ಗಿಡ–ಗಂಟಿಗಳು ಬೆಳೆದಿವೆ. ಅಲ್ಲದೇ ರಾತ್ರಿ ಸಮಯದಲ್ಲಿ ಕುಡುಕರ ತಾಣವಾಗುತ್ತದೆ. ಕಟ್ಟಡ ಸಂಪೂರ್ಣ ಹಾಳಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟಡದ ಉದ್ಘಾಟನೆ ಮಾಡಿ ರೈತರಿಗೆ ಅನುಕೂಲ ಮಾಡಿಕೋಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ತೆಲಂಗ ಒತ್ತಾಯಿಸುತ್ತಾರೆ.