ಇವರಿಗೆ 1.10 ಎಕರೆ ಕೃಷಿ ಜಮೀನಿದ್ದು, ಬಿತ್ತನೆ ಹಾಗೂ ಉಳುಮೆಗಾಗಿ ದಾಡಗಿ ಪಿಕೆಪಿಎಸ್ನಲ್ಲಿ ₹20 ಸಾವಿರ ಹಾಗೂ ಖಾಸಗಿ ಸಾಲ ಮಾಡಿದ್ದರು. ಅತಿವೃಷ್ಟಿಯಿಂದ ಮುಂಗಾರಿನ ಹೆಸರು ಬೆಳೆ ಫಸಲು ಕೈಕೊಟ್ಟಿರುವ ಪರಿಣಾಮ ಸಾಲ ತೀರಿಸುವ ಚಿಂತೆಯಲ್ಲಿ ಮನೆಯಲ್ಲಿ ಹೆಸರು ಬೆಳೆಗೆ ಸಿಂಪರಣೆಗಿಟ್ಟದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಅವರನ್ನು ತಕ್ಷಣ ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೀದರ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.