ಭಾಲ್ಕಿ: ತಾಲ್ಲೂಕಿನ ಹಾಲಹಳ್ಳಿ(ಕೆ) ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೌಡಪ್ಪ ಸಿದ್ರಾಮಪ್ಪ ನೀಲಾ (68) ಮೃತ ರೈತರು.
ಬ್ಯಾಲಹಳ್ಳಿಯ ಪಿಕೆಪಿಎಸ್ನಲ್ಲಿ ₹60 ಸಾವಿರ ಹಾಗೂ ಪಿಕೆಜಿಬಿಯಲ್ಲಿ ₹2.5 ಲಕ್ಷ ಸಾಲ ಮಾಡಿಕೊಂಡಿದ್ದರು. ಹಾಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪುತ್ರ ಸಂತೋಷ ಗೌಡಪ್ಪ ನೀಡಿರುವ ದೂರಿನ ಮೇರೆಗೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರಸಪ್ಪ ಮಲಕಪ್ಪ
ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ರೈತ ನರಸಪ್ಪ ಮಲಕಪ್ಪ ಮರಕುಂದಿ (70) ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಲ್ಲಿನ ಎಸ್ಬಿಐ ಬ್ಯಾಂಕ್ನಲ್ಲಿ ₹90 ಸಾವಿರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹50 ಸಾವಿರ ಸಾಲ ಪಡೆದಿದ್ದರು ಎಂದು ಕಟುಂಬದವರು ತಿಳಿಸಿದ್ದಾರೆ. ಮನ್ನಾಎಖ್ಖೇಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.