ಈಗಾಗಲೇ ಮುಂಗಾರು ಬಿತ್ತನೆಗೆ ರೈತರು ಸಿದ್ಧವಾಗಿದ್ದು, ಬೀಜಗೊಬ್ಬರ ಖರೀದಿಗೆ ಹಣದ ಅವಶ್ಯಕತೆ ಇದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ ರೈತರಿಗೆ ಲಾಕ್ ಡೌನ್ ಸಂಕಷ್ಟ ತಂದೊಡ್ಡಿದೆ. ಹಣ ಪಡೆಯಲು ಬಂದರೆ ಪಟ್ಟಣದಲ್ಲಿ ಪೊಲೀಸರ ಕಾಟ ತಪ್ಪಿಸಿಕೊಳ್ಳಲಾಗುತ್ತಿಲ್ಲ. ದಂಡ ತಪ್ಪಿದ್ದಲ್ಲ. ದಂಡ ತುಂಬಿ ಮತ್ತೇ ರೈತ ಸಂಪರ್ಕ ಕೇಂದ್ರ ಮುಂದೆ ಸರದಿಯಲ್ಲಿ ನಿಲ್ಲುವುದು ಕೂಡ ತಪ್ಪುತ್ತಿಲ್ಲ ಎನ್ನುತ್ತಾರೆ ರೈತರು.