ಔರಾದ್: ತಾಲ್ಲೂಕಿನ ಬೆಲ್ದಾಳ ಗ್ರಾಮದ ಅಂಗನವಾಡಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸದ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಧ್ವಜಾರೋಹಣ ನಡೆಯಲಿಲ್ಲ ಎಂಬ ಮಾಹಿತಿ ಅರಿತ ರಕ್ಷಣಾ ವೇದಿಕೆಯ ಅಂಬಾದಾಸ ಉಪ್ಪಾರ ನವೀನರೆಡ್ಡಿ, ನವೀನ ಉಪ್ಪಾರ, ರಾಜು ಮತ್ತಿತರರು ಪ್ರತಿಭಟನೆ ನಡೆಸಿ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಲ್ದಾಳ ಗ್ರಾಮದ ಅಂಗನಾಡಿಯ ಅವ್ಯವಸ್ಥೆ ಸುಧಾರಿಸಬೇಕು. ಮೂಲ ಸೌಕರ್ಯ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.